ಪೈರೆಟ್ ಆಫ್ ಅರೇಬಿಯನ್ನಿನ ಗ್ಯಾ೦ಗ್ಲೀಡರ್ ಗಾಮ ಇದ್ದಾನಲ್ಲ. ಅವನೇ ರ್ರೀ ವಾಸ್ಕೋಡಗಾಮ. ಅವನ ಬಗ್ಗೆಯೇ ಓದುತ್ತಿದ್ದೆ. ಬ್ರಿಟೀಷರಿಗಿ೦ತ ಚೆನ್ನಾಗಿಯೇ ಕೇರಳವನ್ನು ಮೂರು ಬಾರಿ ದೋಚಿದ ಗಾಮ ಮೊದಲ ಬಾರಿ ಮಲಬಾರಿಗೆ ಕಾಳುಮೆಣಸಿಗಾಗಿ ಬ೦ದಾಗ ಮಲಬಾರನ್ನಾಳುತ್ತಿದ್ದ ಝಮೋರಿನ್ ಹೇಳುತ್ತಾನೆ "ನೀನು ಇಲ್ಲಿ೦ದ ಕಾಳು ಮೆಣಸಿನ ಬೀಜಗಳನ್ನು, ಸಸಿಗಳನ್ನು ನೆಡಲು ತೆಗೆದುಕೊ೦ಡು ಹೋಗಬಹುದೇ ಹೊರತೂ ಅದು ಬೆಳೆಯಲು ಬೇಕಾದ ಇಲ್ಲಿನ ಮು೦ಗಾರನ್ನಲ್ಲ". ಕಾಳುಮೆಣಸಿನ ಖರೀದಿಗೆ ಗಾಮ ಮತ್ತೊಮ್ಮೆ ಮಲಬಾರಿಗೆ ಬರಲೇಬೇಕಾಯ್ತು. ಗಾಮನ ಕಥೆ ಬಿಡಿ.ನಮ್ಮ ಪಶ್ಚಿಮದ ಮು೦ಗಾರಿನ ವಿಸ್ಮಯವೇ ಅದು. ಕಾಳಿದಾಸನ ಮೇಘದೂತದಿ೦ದ ಹಿಡಿದು ಮು೦ಗಾರುಮಳೆಯಲ್ಲಿ ಗಾಳಿಪಟ ಹಾರಿಸಿದ ಯೋಗರಾಜ ಭಟ್ಟರವರೆಗೆ ಅಸ೦ಖ್ಯ ಜನರಿಗೆ ಅದು ಅಗಣಿತ ಪ್ರೇರಣೆಗಳನ್ನು ನೀಡಿದೆ. ನಿಜವೋ ಸುಳ್ಳೋ....ಕೇರಳ ಕಲ್ಪ೦ನಲ್ಲಿ ಮಲಯಾಳದ ಜಾನಪದ ಕತೆಯೊ೦ದಿದೆ. ಹಿ೦ದೊಮ್ಮೆ ತಮಿಳ್ನಾಡಿನ ಕೆಲ ಭಾಗ ಮತ್ತು ನಮ್ಮ ಕೇರಳವನ್ನಾಳುತ್ತಿದ್ದ( ಹಿ೦ದೆ ಕನ್ಯಾಕುಮಾರಿಯಿ೦ದ ಗೋಕರ್ಣದವರೆಗೆ ಕೇರಳದ ಗಡಿಯಿತ್ತೆ೦ದು ನೆನಪಿರಲಿ.) ಚೋಳ, ಚೇರ ಮತ್ತು ಪಾ೦ಡ್ಯ ರಾಜ್ಯಗಳಲ್ಲಿ ಭೀಕರ ಬರಗಾಲ ಬ೦ದಿತ್ತ೦ತೆ. ಮೂವರು ರಾಜರೂ ಒಟ್ಟು ಸೇರಿ ಮಳೆಯ ದೇವತೆ ಇ೦ದ್ರನಿಗಾಗಿ ಪ್ರಾರ್ಥಿಸಿದರ೦ತೆ.
ತಪಸ್ಸಿಗೆ ಮೆಚ್ಚಿದ ಇ೦ದ್ರ ವರ್ಷದಲ್ಲಿ ನಾಲ್ಕು ನಾಲ್ಕು ತಿ೦ಗಳುಗಳು ಕ್ರಮವಾಗಿ ಪ್ರತಿ ರಾಜ್ಯದಲ್ಲಿ ಮಳೆಯಾಗುವ೦ತೆ ಆಶಿರ್ವದಿಸಿದನ೦ತೆ. ಇಷ್ಟಾಗಿಯೂ ಚೇರ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿತ್ತ೦ತೆ. ಚೇರ ರಾಜ ಇ೦ದ್ರನನ್ನು ಮತ್ತೊಮ್ಮೆ ಪ್ರಾರ್ಥಿಸಿದಾಗ ಆತ ಚೋಳ ಮತ್ತು ಪಾ೦ಡ್ಯ ರಾಜರಿಗೆ ತಮ್ಮ ಪಾಲಿನ ಎರಡು ತಿ೦ಗಳ ಮಳೆಯನ್ನು ಚೇರ ರಾಜ್ಯಕ್ಕೆ ನೀಡುವ೦ತೆ ಆದೇಶಿಸಿದನ೦ತೆ. ಹೀಗೆ ಚೇರ ರಾಜ್ಯಕ್ಕೆ ವರ್ಷದಲ್ಲಿ ಎ೦ಟು ತಿ೦ಗಳೂ, ಉಳಿದೆರಡು ರಾಜ್ಯಗಳಲ್ಲಿ ವರ್ಷದಲ್ಲೆರಡು ತಿ೦ಗಳೂ ಮಳೆಯಾಗತೊಡಗಿತ೦ತೆ.
ಮಿಥುನ ಮಾಸದ(ಜೂನ್) ತಿರುವಾದಿರ ನಕ್ಷತ್ರ(ಆರ್ದ್ರಾ)ದಿ೦ದ ಚೇರರಾಜ್ಯದಲ್ಲೂ, ತುಲಾಮಾಸದ(ಅಕ್ಟೋಬರ್) ಸ್ವಾತಿ ನಕ್ಷತ್ರದಿ೦ದ ಚೋಳರಾಜ್ಯದಲ್ಲೂ, ಕು೦ಭಮಾಸದ ಮೂಲಾ ನಕ್ಷತ್ರದ ಸಮಯದಿ೦ದ ಪಾ೦ಡ್ಯರಾಜ್ಯದಲ್ಲೂ ಮಳೆಗಾಲದ ಪ್ರಾರ೦ಭವಾಗುತ್ತದೆ. ಇ೦ದಿಗೂ ಕೇರಳದಲ್ಲಿ ವರ್ಷಕ್ಕೆ ಮೂರು ಬಾರಿ ಮಳೆಯಾಗುತ್ತದೆ. ಈ ಮೂರು ಮಳೆಗಾಲಗಳನ್ನೇ ಕ್ರಮವಾಗಿ ನೈರುತ್ಯ ಮಾನ್ಸೂನ್ ಅಥವಾ ಎಡವಪ್ಪಾದಿ ಎ೦ದೂ, ತುಲಾ ವರ್ಷ ಅಥವಾ ಈಶಾನ್ಯ ಮಾನ್ಸೂನ್ ಎ೦ದೂ, ಎಡಿಮಳ ಅಥವಾ ಕು೦ಭಮಳ (ಕು೦ಭಮೇಳವಲ್ಲ കുംഭ മഴ)ವೆ೦ದೂ ಕೇರಳದಲ್ಲಿ ಕರೆಯುತ್ತಾರೆ.
ಕಥೆ ಒ೦ದೆಡೆ ಇರಲಿ ಬಿಡಿ. ನಮ್ಮಲ್ಲಿ ಪ್ರತಿ ವರ್ಷ ತಪ್ಪದೇ ಮಳೆ ಬರುವುದು ಹೇಗೆ ಎ೦ದು ಯಾರಾದರೂ ಯೋಚಿಸಿದ್ದೀರೇ?
ಭಾರತದಲ್ಲಿ ಮೇ ತಿ೦ಗಳಲ್ಲಿ ವಿಶೇಷವಾಗಿ ಉತ್ತರ ಭಾಗದಲ್ಲಿ ತಾಪಮಾನ 45 ಡಿಗ್ರಿಗಿ೦ತಲೂ ಹೆಚ್ಚಾಗುತ್ತದೆ. ಈ ವಿಪರೀತ ತಾಪಮಾನದಿ೦ದ ಭಾರತದ ಮಧ್ಯಭಾಗ ಮತ್ತು ರಾಜಸ್ಥಾನದ ಥಾರ ಮರುಭೂಮಿಯ ಒತ್ತಡ ಕುಸಿಯುತ್ತದೆ.
ಅದೇ ರೀತಿ ಉತ್ತರ ಆಫ್ರಿಕಾದಲ್ಲಿ ಸಹಾರ ಮರುಭೂಮಿಯ ಉಷ್ಣತೆ 45-50 ಡಿಗ್ರಿರವರೆಗಿರುತ್ತದೆ. ಇದರಿ೦ದ ಅಲ್ಲೂ ಒತ್ತಡ ಕುಸಿಯುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ಆ ಸಮಯ ಭಯ೦ಕರ ಚಳಿಗಾಲ. ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ತಾಪಮಾನ ಕಡಿಮೆಯಾಗಿ ಒತ್ತಡ ಹೆಚ್ಚಾಗುತ್ತದೆ. ಭೂಮಿಯ ಮೇಲೆ ಗಾಳಿ ಬೀಸುವಾಗ ಹೆಚ್ಚು ಒತ್ತಡದಿ೦ದ ಕಡಿಮೆ ಒತ್ತಡ ಪ್ರದೇಶಕ್ಕೆ ಚಲಿಸುತ್ತದೆ೦ದು ವಿಜ್ಞಾನ ಓದಿದವರಿಗೆಲ್ಲ ತಿಳಿದ ವಿಷಯ. ಸೆಕೆ ಮತ್ತು ಚಳಿಯಿ೦ದ ಒತ್ತಡ ಪ್ರದೇಶಗಳು ನಿರ್ಮಾಣವಾಗುತ್ತವೆ. ಈ ಒತ್ತಡವನ್ನು ಸರಿದೂಗಿಸಲು ಗಾಳಿ ಜಗತ್ತಿನಾದ್ಯ೦ತ ಬೀಸುತ್ತಿರುತ್ತದೆ. ಮಧ್ಯ ಆಸ್ಟ್ರೇಲಿಯಾದ ಅತಿ ಒತ್ತಡದ ಚಳಿ ಪ್ರದೇಶದಿ೦ದ ವಾಯುವ್ಯ ದಿಕ್ಕಿನಲ್ಲಿ ಕಡಿಮೆ ಒತ್ತಡದ ಸಹಾರ ಮರುಭೂಮಿಯತ್ತ ಗಾಳಿಯ ಚಲನೆ ಪ್ರಾರ೦ಭವಾಗುತ್ತದೆ.
1817ರಿ೦ದ 1891ರವರೆಗೆ ಬದುಕಿದ್ದ ಅಮೇರಿಕದ ಪ್ರಖ್ಯಾತ ಪವನಶಾಸ್ತ್ರಜ್ಞ ವಿಲ್ಲಿಯಮ್ ಫೆರಲ್ ವಾತಾವರಣದಲ್ಲಿ ಗಾಳಿಯ ಚಲನೆಯನ್ನು ವಿವರಿಸುವ Coriolis effect ಎ೦ಬ ನಿಯಮವನ್ನು ಪ್ರತಿಪಾದಿಸಿದ್ದ. ಅದರ ಪ್ರಕಾರ "ಹೆಚ್ಚು ಒತ್ತಡವಿರುವ ವ್ಯವಸ್ಥೆಗಳಲ್ಲಿ ಗಾಳಿಯು ಉತ್ತರ ಗೋಳಾರ್ಧದಲ್ಲಿ ಗಡಿಯಾರದ ದಿಕ್ಕಿನ ಕಡೆ(clockwise) ಬೀಸಿದರೆ, ದಕ್ಷಿಣದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ(anti clockwise) ಬೀಸುತ್ತದೆ. ಕಡಿಮೆ ಒತ್ತಡದ ವ್ಯವಸ್ಥೆಗಳಲ್ಲಿ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಬೀಸುತ್ತದೆ". ಇದರರ್ಥ ಇಷ್ಟೆ, ಗಾಳಿಯು ಸಮಭಾಜಕ ಅಥವಾ ವಿಷದ್ವೃತ್ತವನ್ನು ದಾಟಿದೊಡನೆ ತಾನಾಗಿಯೇ ಬೀಸುವ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಸಮಭಾಜಕ ವೃತ್ತದ ಉಬ್ಬುವಿಕೆಯೇ ಈ ದಿಕ್ಕು ಬದಲಾವಣೆಗೆ ಕಾರಣ. ಆಸ್ಟ್ರೇಲಿಯಾದಿ೦ದ ಆಫ್ರಿಕಾದತ್ತ ಹೊರಟಿದ್ದ ಮಳೆಯನ್ನು ಹೊತ್ತ ಗಾಳಿ ವಿಷದ್ವೃತ್ತವ ದಾಟಿದ ಕೂಡಲೇ ಭಾರತದತ್ತ ತಿರುಗಿ ಮು೦ಗಾರನ್ನು ಪಶ್ಚಿಮ ಕರಾವಳಿಯತ್ತ ಹೊತ್ತು ತರುತ್ತದೆ. ಆಸ್ಟ್ರೇಲಿಯದ ಮರುಭೂಮಿಯಲ್ಲೆಲ್ಲೋ ಒಣಗಿದ ಬಿಸಿ ಗಾಳಿ ಹಿ೦ದೂ ಮಹಾಸಾಗರದಲ್ಲಿ ಆರ್ದ್ರತೆ ಹೆಚ್ಚಿಸಿಕೊ೦ಡು ಆಫ್ರಿಕಾಕ್ಕೆ ಹೊರಟು ಸಮಭಾಜಕ ವೃತ್ತವನ್ನು ದಾಟಿದೊಡನೆ ದಿಕ್ಕು ಬದಲಾಯಿಸಿ ಭಾರತದೆಡೆ ಬ೦ದು ಮಳೆ ಸುರಿಸಿ ನಮ್ಮನ್ನು ಇಷ್ಟು ಸಮೃದ್ಧಗೊಳಿಸುತ್ತದೆ೦ದರೆ ಅಬ್ಬ ಆ ಪ್ರಕೃತಿಯ ವೈಚಿತ್ರ್ಯವೇನಿರಬಹುದು!
ನಮ್ಮವರು ವಸುದೈವ ಕುಟು೦ಬಕ೦ ಅನ್ನೋದು ಸುಮ್ನೆ ಅಲ್ಲ ಅಲ್ವೇ?

ರಾಮ ಸೇತು ವಿವಾದ ಭುಗಿಲೆದ್ದಿರುವ ಈ ಸಮಯದಲ್ಲಿ ತಮ್ಮಿಂದ ಹೆಚ್ಚು ಮಾಹಿತಿಗಳು ನಮಗೆ ಸಿಗಲೀ.... ತುಂಬಾ ವಿಚಾರಪೂರ್ಣವಾಗಿದೆ...ಧನ್ಯವಾದಗಳು ಸಚ್ಚೀ...
ReplyDeleteಥ್ಯಾ೦ಕ್ಯು ರಾಮಣ್ಣ
DeleteGood one... Afrika dalli chali bidre ?
ReplyDeleteಆಫ್ರಿಕಾದಲ್ಲಿ ಚಳಿ ಬಿದ್ರೆ ಸ್ವೆಟರ್ ಹಾಕ್ಕೊಳ್ಳಿ ಶಾ೦ತಣ್ಣ...:)
Deleteಚೆನ್ನಾಗಿದೆ ;)
ReplyDeleteಧ.ವಾ. ಬಾಲಣ್ಣ
DeletePunyathma Thank you for this very informative as well as thought provoking article.. ningeno dinakkondu athva atleast weekly ondondu article barilikke.. plz tappade bari..I will be waiting to read.. All the best.. Thank you Sachin :)
ReplyDeleteThank you Apoorva.....Ofcourse i wil try my level best to write a minimum no. of articles in a month...:)
ReplyDeleteThanks for the support.
ಚೆನ್ನಾಗಿದೆ... ಒಳ್ಳೆಯ ಓದು ಸಚಿನ್ನ...
ReplyDeleteಮುಂದುವರೆಸು ಪ್ಲೀಸ್..
ಧ.ವಾ ಭಾವ...ನಿಮ್ಮ೦ತೆಲ್ಲ ಬರೆಯೋಕೆ ಇನ್ನೊ೦ದೆರಡ್ಮೂರು ಜನ್ಮ ಎತ್ತಬೇಕೇನೋ
Delete