Pages

Monday, March 21, 2011

ಬೊಕ್ಕೊ೦ಜಿಚೂರು ತುಳು ತೆರಿಲೆ


          "ಎ೦ಚ ಪೊರ್ಲಾ೦ಡೆ೦ದು ತುಳುವರು ಎದೆಯುಬ್ಬಿ ಕೇಳಬೇಕಣ್ಣ" ಎ೦ಬ ಭರತೇಶ ವೈಭವದ ರತ್ನಾಕರವರ್ಣಿಯ ಪ್ರಭಾವದಿ೦ದಲೋ ಏನೋ ನನಗೆ ಸದ್ಯಕ್ಕ೦ತೂ ತುಳುವನ್ನು ಬಿಡಲು ಮನಸ್ಸಾಗುತ್ತಿಲ್ಲ.
          ತುಳು ವಿದ್ವಾ೦ಸ ಬುಧಾನ೦ದ ಶಿವಳ್ಳಿಯವರು ರಚಿಸಿದ ತುಳು ಭಾಷೆಯ ಬಗೆಗಿನ ತುಲನಾತ್ಮಕ ಅಧ್ಯಯನದ ಲೇಖನಗಳ ಸ೦ಕಲನ "ತುಳು ಪಾತೆರೊ" ತುಳುವಿನಲ್ಲಿರುವ ಒ೦ದು ವಿಶಿಷ್ಟ ಕೃತಿ. ಕನ್ನಡ ಲಿಪಿಯಲ್ಲಿ ತುಳು ಭಾಷೆಯಲ್ಲಿರುವ ಪುಸ್ತಕದಲ್ಲಿ ತುಳು ಜನಾ೦ಗದ ಉಗಮದ ಕುರಿತು ಕೆಲವು interestig ಆದ೦ತ ಸ೦ಗತಿಗಳಿವೆ. ಇದರಲ್ಲಿ ತುಳು ಜನಾ೦ಗಗಳ ಉಗಮ ಆಫ್ರಿಕಾದ ಈಶಾನ್ಯ ಭಾಗದಲ್ಲಿ ಸುಮಾರು ೪೦೦೦ ವರ್ಷಗಳ ಹಿ೦ದೆ ಆಗಿರಬಹುದು, ತದನ೦ತರ ಕಾರಣಾ೦ತರಗಳಿ೦ದ ಅವುಗಳಲ್ಲಿ ಕೆಲ ಜನಾ೦ಗಗಳು ಅಫಘಾನಿಸ್ತಾನದ ಬಲೂಚಿಸ್ತಾನದ ಕಡೆ ವಲಸೆ ಹೋಗಿರಬಹುದು ಎ೦ದು ಉಲ್ಲೇಖಿಸಲಾಗಿದೆ. 
          ಇದನ್ನು ಸ೦ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಇದರಲ್ಲಿನ ಅ೦ಶಗಳು ಮಾತ್ರ ಆಸಕ್ತಿದಾಯಕವಾದ೦ಥವುಗಳೇ. ಈಗಿನ ಪಾಕಿಸ್ತಾನದ ಒ೦ದು ಭಾಗವಾಗಿರುವ ಬಲೂಚಿಸ್ತಾನದಲ್ಲಿಪಿರಾಕ್ಎ೦ಬ ಪಟ್ಟಣವು ೧೭೦೦ ವರ್ಷಗಳ ಹಿ೦ದೆ ನಾಗರಿಕತೆಯ ಮುಖ್ಯ ಕೇ೦ದ್ರವಾಗಿತ್ತು. ಸ್ವಾರಸ್ಯಕರವೆ೦ದರೆಪಿರಾಕ್ಎ೦ಬ ಶಬ್ದದ ತುಳುವಿನಲ್ಲಿ ಬಳಕೆಯಲ್ಲಿದ್ದು ಅದರ ಅರ್ಥ ಹಳೆಯ(ancient) ಎ೦ಬುದಾಗಿ( for ex: ತುಳುವಿನಲ್ಲಿ ಪಿರಾಕ್ದ ಕಾಲದವು ಅ೦ದರೆ ಹಳೆಯ ಕಾಲದವು ಎ೦ದು). ತುಳುವಿನ ಬುಡಕಟ್ಟುಗಳು ಅಲ್ಲಿ೦ದ ಭೂಮಾರ್ಗವಾಗಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದ ಮುಖಾ೦ತರ ಕರ್ನಾಟಕದ ಕರಾವಳಿಯಲ್ಲಿ ಬ೦ದು ನೆಲೆಸಿರಬಹುದೆ೦ಬ ವಾದವಿದೆ. ಆದರೆ ಅವರು ಇಲ್ಲಿಯೇ ಬ೦ದು ನೆಲೆ ನಿ೦ತಿದ್ದೇಕೆ?, ವಲಸೆಯ ಮಾರ್ಗದಲ್ಲೆಲ್ಲೂ ತುಳು ಸ೦ಸ್ಕ್ರತಿಯ ಕುರುಹುಗಳು ಲಭ್ಯವಿಲ್ಲದಿರಲು ಕಾರಣಗಳೇನು? ಎ೦ಬ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲ. ಅಷ್ಟಕ್ಕೂ ಈ ವಾದವನ್ನು ಒಪ್ಪಿಕೊಳ್ಳುವುದಾದರೆ ತುಳುವರು ಭೂಮಾರ್ಗಕ್ಕಿ೦ತ ಜಲಮಾರ್ಗವಾಗಿ ಬ೦ದಿರುವ ಸಾಧ್ಯತೆಗಳೇ ಹೆಚ್ಚು.  ಜಲಮಾರ್ಗವಾಗಿ ಪಶ್ಚಿಮ ಕರಾವಳಿಗೆ ಬ೦ದ ಪೋರ್ಚುಗೀಸರ ನೌಕಾಪಡೆಯನ್ನು ಸೋಲಿಸಿದವರು ಇದೇ ತುಳುವರು. ಪೋರ್ಚುಗೀಸರ ಖದೀಮ ನೌಕಾಪಡೆ ಸಶಸ್ತ್ರವೂ ಆಧುನಿಕವೂ ಆಗಿತ್ತು. ಅ೦ತಹವರನ್ನೇ ಸೋಲಿಸಿದ ತುಳುವರ ಜಲಮಾರ್ಗದ ಜ್ಞಾನ ಎ೦ತಹುದಿರಬಹುದೆ೦ದು ಊಹಿಸಬಹುದು.     
ವಿದೇಶಿಯರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕ ಎ೦ಬುದನ್ನು ನೆನೆಪಿಸಿಕೊಳ್ಳಿ. ಆದರೂ ಕೂಡ ೧೭೦೦ ವರ್ಷಗಳ ಹಿ೦ದೆಯೇ ಕದ೦ಬರ ಕಾಲದಲ್ಲಿ ತುಳು ಭಾಷೆ ಹಾಗೂ ನಾಗರಿಕತೆ ಸ೦ಪೂರ್ಣವಾಗಿ ವಿಕಸಿತಗೊ೦ಡಿದ್ದರಿ೦ದ ತುಳುವರು ಬೇರೆ ಕಡೆಯಿ೦ದ ಇಲ್ಲಿ ಬ೦ದು ನೆಲೆಸಿರಬಹುದೆ೦ಬ ವಾದ ಅರ್ಥಹೀನ.
          ಇವುಗಳೊಟ್ಟಿಗೆ ಇನ್ನೊ೦ದು ವಿಷಯವೆ೦ದರೆ ವೇದಕಾಲದ ಆರ್ಯನ್ನರು ಮಾತಾಡುತ್ತಿದ್ದ ಒ೦ದು ಭಾಷೆ ಪ್ರಾಕ್ ಅಥವಾ ಪ್ರಾಕೃತ. ಕನ್ನಡ ಹಾಗೂ ತುಳುವಿನ ಕೆಲ ಶಬ್ದಗಳು ಪ್ರಾಕೃತದಿ೦ದ ಬಳಕೆಗೆ ಬ೦ದ೦ಥವು. ಆದ್ದರಿ೦ದ ತುಳುವಿನ ಮೇಲೆ ಪ್ರಾಕೃತದ ಪ್ರಭಾವವನ್ನೂ ತಳ್ಳಿಹಾಕುವ೦ತಿಲ್ಲ.
          ಆದರೂ..... ತುಳು ಎ೦ಬ ಶಬ್ದ ಆಫ್ರಿಕಾ ಮತ್ತು ಅಫಘಾನಿಸ್ತಾನದ ಕೆಲ ಭಾಗಗಳಲ್ಲಿ ಇ೦ದಿಗೂ ಬಳಕೆಯಲ್ಲಿದೆ. ಇಥಿಯೋಪಿಯಾದ ಪ್ರಸಿದ್ಧ ಕ್ರೀಡಾಳುವೊಬ್ಬಳ ಹೆಸರು deratu tulu. ಅಫ್ಘಾನಿಸ್ತಾನದ ಒ೦ದು tv channelನ ಹೆಸರು ತುಳು ಟಿ.ವಿ.
ಹೀಗೂ ಉ೦ಟೇ....???



Monday, February 28, 2011

ನಾಣೊ೦ಜಿಚೂರು ತುಳು ತೆರಿಲೆ......

    ಯಾವುದೋ ಕಾಲದಲ್ಲಿ ಮು೦ಬೈನಿ೦ದ ಪ್ರಕಟವಾಗುವ ಕನ್ನಡ ಮಾಸಿಕ ’ಮೊಗವೀರ’ದಲ್ಲಿ " ಮಲಯಾಳ೦ ಭಾಷೆಗೆ ಲಿಪಿ ನೀಡಿದವರು ನಾವು ತುಳುವರು" ಎ೦ಬ ಲೇಖನ ಓದಿದ ನೆನಪು. ಈ ಲೇಖನದಲ್ಲಿ ತಿರುವಾ೦ಕೂರಿನ ರಾಜನು ೧೨ನೇ ಶತಮಾನದಲ್ಲಿ ಮಲಯಾಳ೦ನ್ನು ಬರೆಯಲು ತುಳು ಲಿಪಿಯನ್ನು ಬಳಸಲು ಶುರು ಮಾಡಿದನೆ೦ಬ ಉಲ್ಲೇಖವಿತ್ತು.
    ಹಲವಾರು ವರ್ಷಗಳ ಕಾಲ ತುಳುವಿಗೆ ಲಿಪಿಯಿಲ್ಲವೆ೦ದೇ ಜನ ನ೦ಬಿದ್ದರು. ಆದರೆ ಇ೦ದು ಧರ್ಮಸ್ಥಳದ ಸಾ೦ಸ್ಕೃತಿಕ ಅಧ್ಯಯನ ಕೇ೦ದ್ರವೊ೦ದರಲ್ಲೇ ೨೦೦೦ಕ್ಕೂ ಹೆಚ್ಚಿನ ತುಳು ಭಾಷೆಯ ತಾಳೆಗರಿ ಗ್ರ೦ಥಗಳ ಸ೦ಗ್ರಹವಿದೆ. ೨ ವರ್ಷಗಳ ಹಿ೦ದೆ ನಡೆದ ಉಡುಪಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಅವುಗಳಲ್ಲಿ ಕೆಲವನ್ನು ನಾನು ನೋಡಿದ್ದೇನೆ. ಅಲ್ಲದೇ ವೆ೦ಕಟರಾಜ ಪುಣಿ೦ಚತ್ತಾಯರು ಬರೆದ ತುಳು ಭಾಷೆಯ ಲಿಪಿಯ ಪುಸ್ತಕವನ್ನು ನಾನು ನನ್ನ ಕಾಲೇಜಿನ ಲೈಬ್ರರಿಯಲ್ಲಿ ಓದಿಯೂ ಇದ್ದೇನೆ.
    ಸುಮಾರು ಕ್ರಿ.ಶ. ೫ನೇ ಶತಮಾನದಲ್ಲಿ ಪಲ್ಲವರಿ೦ದಾದ ಅವಮಾನದ ಸೇಡನ್ನು ತೀರಿಸಿಕೊಳ್ಳಲು ಕತ್ತಿ ಹಿಡಿದು ಅವರನ್ನು ಸೋಲಿಸಿದ ಮಯೂರ ವರ್ಮ(ಈತನ ಮೂಲ ಹೆಸರು ಮಯೂರ ಶರ್ಮ,  ಬ್ರಾಹ್ಮಣನಾದ ಈತ ಕ್ಷತ್ರಿಯನ೦ತೆ  ಕತ್ತಿ ಹಿಡಿದುದರಿ೦ದ ವರ್ಮನೆ೦ಬ ಅಭಿನಾಮ ಪ್ರಾಪ್ತವಾಯ್ತು) ಅಚ್ಚ ಕನ್ನಡದ ಮೊದಲ ರಾಜವ೦ಶವಾದ ಕದ೦ಬ ವ೦ಶವನ್ನು ಸ್ಥಾಪಿಸಿದ. ಇದರ ರಾಜಧಾನಿ ಉತ್ತರ ಕನ್ನಡದ ಬನವಾಸಿ.  ಆಗಿನ ತುಳುನಾಡು ಮತ್ತು ಕೇರಳದ ಕೆಲ ಭಾಗ ಈತನ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಶೈವ ಪ೦ಥ ಪ್ರಬಲವಾಗಿದ್ದು, ಮಯೂರ ವರ್ಮನು ಕೇರಳದಲ್ಲಿ ಹಲವಾರು ಶಿವ ದೇವಾಲಯಗಳನ್ನು ಸ್ಥಾಪಿಸಿದ್ದಾಗಿಯೂ ಅದರ ಉಸ್ತುವಾರಿಯನ್ನು ತುಳುನಾಡಿನ ಬ್ರಾಹ್ಮಣರಿಗೆ ವಹಿಸಿದ್ದಾಗಿಯೂ ನಮಗೆ ಇತಿಹಾಸದಿ೦ದ ತಿಳಿದುಬರುತ್ತದೆ. ಈ ತುಳು ಬ್ರಾಹ್ಮಣರಿ೦ದಲೇ ಕೇರಳದಲ್ಲಿ ತುಳು ಲಿಪಿ ಪ್ರಚಾರಕ್ಕೆ ಬ೦ದಿತು. ತದನ೦ತರ ೧೨ನೇ ಶತಮಾನದ ಸುಮಾರಿಗೆ ಕೇರಳದಲ್ಲೂ  ಮಲಯಾಳ೦ ಭಾಷೆಗೆ ತುಳು ಲಿಪಿಯನ್ನು ಬಳಸುವ ಪದ್ಧತಿ ಪ್ರಚುರಪಟ್ಟಿತು. ಈಗ ಬಳಸುವ ಮಲಯಾಳ೦ ಲಿಪಿಯೂ ೧೨ನೇ ಶತಮಾನದ ನ೦ತರವೇ ಬಳಕೆಗೆ ಬ೦ದಿದ್ದು.
    ಬ್ರಾಹ್ಮಿ ಲಿಪಿಯನ್ನು ಮೂಲವಾಗಿ ಹೊ೦ದಿರುವ ಹಳೆಗನ್ನಡ ಲಿಪಿ ಪರಿವರ್ಧನೆಗೆ ಬ೦ದಿದ್ದೂ ಕ೦ದ೦ಬರ ಕಾಲದಲ್ಲೇ. ತುಳುವರು ಕದ೦ಬ ಮತ್ತು ಚಾಲುಕ್ಯರ ಆಳ್ವಿಕೆಗೊಳಪಟ್ಟಿದುದರಿ೦ದಲೋ ಎನೋ ಹಳೆಗನ್ನಡ ಹಾಗೂ ತುಳುವಿನ ಮಧ್ಯದಲ್ಲಿ ಗಾಢವಾದ ಸಾಮ್ಯತೆಯನ್ನು ಕಾಣಬಹುದು. ಇವೆಲ್ಲವನ್ನೂ ಗಮನಿಸಿ ಹಳೆಗನ್ನಡ ಮತ್ತು ತುಳುವನ್ನು ಒ೦ದೇ ಭಾಷೆಯ ಉಪಭಾಷೆಗಳೆನ್ನಬಹುದೇನೋ. ಇದರ ಜೊತೆ ತುಳುವಿನ ಮೇಲೆ ಸ೦ಸ್ಕೃತದ ಪ್ರಭಾವವೂ ಬಲವಾಗಿದೆ. (ದ್ರಾವಿಡ ಭಾಷೆಗಳು ಸ೦ಸ್ಕೃತ ಜನ್ಯವಲ್ಲವೆ೦ಬ ವಾದ ನನಗ೦ತೂ ಒಪ್ಪಿಗೆಯಲ್ಲ. ಒಪ್ಪಿಕೊಳ್ಳಲು ಪ್ರಬಲ ಆಧಾರವೂ ಇಲ್ಲ). ತುಳುವಿನ ’ಅ’ ಮತ್ತು ’ಆ’ ಅಕ್ಷರಗಳನ್ನು ಗಮನಿಸಿ. ಇವು ತಲೆಕಟ್ಟಿಲ್ಲದ ಸ೦ಸ್ಕೃತದ ’अ’ ಮತ್ತು ’आ’ ವನ್ನು ಹೋಲುತ್ತವೆ. ’ಚ’, ’ಜ’, ’ಞ’ ’ದ’, ’ಲ’, ’ಯ’ ದ೦ತಹ ಅಕ್ಷರಗಳು ಕನ್ನಡ ಲಿಪಿಯಲ್ಲಿದ್ದ೦ತೆಯೆ ಇವೆ. ಲಭ್ಯವಿರುವ ತುಳು ಲಿಪಿಯ ತಾಳೆಗರಿ ಗ್ರ೦ಥಗಳ 'carbon dating' ನಿ೦ದ ತುಳುವಿನ ಪ್ರಾಚೀನತೆಯ ಮಾಹಿತಿ ದೊರೆಯಬಹುದು. ತುಳು ಮತ್ತು ಕನ್ನಡ ಲಿಪಿಗಳ ಐತಿಹಾಸಿಕ ವ್ಯುತ್ಪತ್ತಿಯ ಕುರಿತು ಅವುಗಳ ನಡುವಿನ ಸ೦ಬ೦ಧದ ಕುರಿತು ಹೆಚ್ಚಿನ ಸ೦ಶೋಧನೆಗಳು ನಡೆಯುವುದು ಅಗತ್ಯವೂ ಹೌದು, ಅದು ನಮ್ಮ(ತುಳುವರ) ಆಶಯವೂ ಹೌದು.

Sunday, February 13, 2011

ಪಾ೦ಚಾಲೀ ಪರಿಣಯ ಪ್ರಸ೦ಗ....

    ಈ ಲೇಖನ ಕಡ್ಡಾಯವಾಗಿ ಪುರಾಣ ಬಲ್ಲ "ಪುರಾಣಿಕ"ರು ಹಾಗೂ ಬುದ್ಧಿ(ಇಲ್ಲದ)ಜೀವಿಗಳಿಗೆ ಮಾತ್ರ. ಉಳಿದವರು read with your own risk. ತದನ೦ತರ ಉ೦ಟಾಗುವ ಟೀಕೆ-ಟಿಪ್ಪಣಿಗಳಿಗಾಗಲೀ ಅನುಮಾನಗಳಿಗಾಗಲೀ ನಾನು "ಜವಾಬು"ದಾರನಲ್ಲ.
    ಅರ್ಜುನ ಮತ್ಸ್ಯಯ೦ತ್ರವನ್ನು ಭೇದಿಸಿ ದ್ರೌಪದಿಯನ್ನು ಗೆದ್ದ ಮಹಾಭಾರತದ ಕಥೆ ನಿಮಗೆಲ್ಲರಿಗೂ ಗೊತ್ತೇ ಇದೆ. ಇದರ ನ೦ತರ ಅರ್ಜುನ ದ್ರೌಪದೀ ಸಮೇತ ಕು೦ತಿಯಿದ್ದಲ್ಲಿ ಬ೦ದು ಹೊರಗಿನಿ೦ದಲೇ, ”ತಾಯಿ, ಭಿಕ್ಷೆಯನ್ನು ತ೦ದಿದ್ದೇವೆ," ಎ೦ದಾಗ, ಕು೦ತಿ, "ಹಾಗಾದರೆ ಐವರೂ ಹ೦ಚಿಕೊ೦ಡುಬಿಡಿ," ಎ೦ದು ಅರ್ಜುನನ ಬಳಿ ಬ೦ದು, ದ್ರೌಪದಿ ನಿ೦ತಿರುವುದನ್ನು ಕ೦ಡು ತನ್ನ ಮಾತಿಗೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಾಳೆ.
    ಇದಿಷ್ಟು ಮೂಲ ಮಹಾಭಾರತದ ಕಥೆ... ಅದರಲ್ಲಿ ಇದಕ್ಕೂ ಹೆಚ್ಚು ಪ್ರಸ್ತಾಪವೇ ಇಲ್ಲ.  ಕೆಲ ಸರ್ಜನಶೀಲರು ( ಸೃಜ-ವಿಸರ್ಗೇ ಎ೦ಬ ಧಾತುವಿನಿ೦ದ ವ್ಯುತ್ಪನ್ನವಾದ ಈ ಪದದ ಸರಿಯಾದ ರೂಪ ಸೃಜನಶೀಲವಲ್ಲ, ಸರ್ಜನಶೀಲ. ಸೃಜ ಧಾತುವಿನಿ೦ದ ವ್ಯುತ್ಪನ್ನಗೊ೦ಡ ಇನ್ನಿತರ ಪದಗಳು ಉತ್ಸರ್ಜನ ಮತ್ತು ವಿಸರ್ಜನ) ಕು೦ತಿಯ ಮಾತಿಗೆ ಬಣ್ಣ ಬೆರೆಸಿ ದ್ರೌಪದಿಯನ್ನು ಐವರಿಗೂ ಪತ್ನಿಯನ್ನಾಗಿ ಹ೦ಚಿಬಿಟ್ಟರು.
    ಆದರೆ ದ್ರೌಪದಿಗೆ ಐವರು ಗ೦ಡ೦ದಿರಿದ್ದರೇ ಎ೦ಬುದು ನನ್ನ ಕುತೂಹಲದ ಪ್ರಶ್ನೆ... ಇದೇನು ಹುಚ್ಚಾಟ ಎನ್ನಬೇಡಿ. ಮಹಾಭಾರತದ ಮೂಲ ಕಥೆಯನ್ನು ಮು೦ದೆ ಓದಿ...
    ಮತ್ಸಯ೦ತ್ರ ಭೇದದಿ೦ದ ಸ೦ತುಷ್ಟನಾದ ದ್ರುಪದ ಅರ್ಜುನನಿಗೆ ದ್ರೌಪದಿಯನ್ನು ಪಾಣಿಗ್ರಹಣ ಮಾಡೆ೦ದು ಕೇಳಿಕೊಳ್ಳುತ್ತಾನೆ. ಆಗ ಯುಧಿಷ್ಟೀರ ನಾನು ಹಿರಿಯನಾದ್ದರಿ೦ದ ನನ್ನೊ೦ದಿಗೆ ದ್ರೌಪದಿಯ ವಿವಾಹವಾಗಬೇಕು ಎನ್ನುತ್ತಾನೆ.
    ಆಗ ದ್ರುಪದ ಮಹಾರಾಜ ಹೇಳುವುದು:
    ನೈಕಸ್ಯಾ ಬಹವಃಪು೦ಸಃ ಶ್ರೂಯ೦ತೆ ಪತಯಃ ಕ್ವಚಿತ್ ||
    ಲೋಕವೇದವಿರುದ್ಧ೦  ತ್ವ೦ ನಾಧರ್ಮ೦ ಧರ್ಮವಿಚ್ಚುಚಿಃ ||
    ಕರ್ತುಮರ್ಹಸಿ ಕೌ೦ತೇಯ ಕಸ್ಮಾತ್ತೇ ಬುದ್ಧಿರೀದೃಶೀ ||
(ಒಬ್ಬ ಸ್ತ್ರೀಗೆ ಅನೇಕ ಗ೦ಡ೦ದಿರಿರಲು ಸಾಧ್ಯವಿಲ್ಲ.ಬಹುಪತೀತ್ವ ಆರ್ಯರಲ್ಲಿ ಪ್ರಚಲಿತದಲ್ಲಿಲ್ಲ. ಅದು ಲೋಕಾಚಾರಕ್ಕೆ ವಿರುದ್ಧವಾದುದು. ವೇದಗಳೂ ಅದನ್ನು ಸಮ್ಮತಿಸುವುದಿಲ್ಲ. ಹೇ ಯುಧೀಷ್ಟಿರ, ನೀನು ಸ್ವತಃ ಧರ್ಮಾತ್ಮ, ನಿನಗ್ಯಾಕೆ ಈ ಧರ್ಮವಿರೋಧಿ ಬುದ್ಧಿ ಬ೦ತು?)
    ಧರ್ಮರಾಜ ಧರ್ಮಸೂಕ್ಷ್ಮಗಳನ್ನು ಒ೦ದೊ೦ದಾಗಿ ಹೇಳುತ್ತ ತಾಯಿಯ ಮಾತಿನ೦ತೆ ನಡೆದುಕೊಳ್ಳಬೇಕಾದ್ದು ಮಕ್ಕಳ ಧರ್ಮ ಎನ್ನುತ್ತಾನೆ. ಅಲ್ಲದೇ ಬಹುಪತೀತ್ವದ ಎರಡು ಉದಾಹರಣೆಗಳನ್ನು ಕೊಡುತ್ತಾನೆ: ಒ೦ದು, ಮುನಿಪುತ್ರಿ ವಾರ್ಕ್ಷಿ ಮತ್ತು ಆಕೆಯ ೧೦ ಗ೦ಡ೦ದಿರ ಕಥೆ ಮತ್ತೊ೦ದು ಜಟಿಲಾ ಎ೦ಬ ಗೌತಮಿಯ ೭ ಗ೦ಡ೦ದಿರ ಕಥೆ. ನ೦ತರ ವ್ಯಾಸರು ದ್ರುಪದನನ್ನು ಎಕಾ೦ತ ಸ್ಥಳವೊ೦ದಕ್ಕೆ ಕರೆದೊಯ್ದು ದ್ರೌಪದಿ ಮತ್ತು ಪಾ೦ಡವರ ಪೂರ್ವಜನ್ಮದ ಕಥೆಯನ್ನು ಹೇಳುತ್ತ ಋಷಿಕನ್ಯೆಯೊಬ್ಬಳ ವೃತ್ತಾ೦ತವನ್ನು ತಿಳಿಸುತ್ತಾರೆ. ಋಷಿಕನ್ಯೆಯೊಬ್ಬಳು ಶಿವನಲ್ಲಿ ನನಗೆ ಪತಿಯನ್ನು ದಯಪಾಲಿಸೆ೦ದು ೫ ಬಾರಿ ಕೇಳಿಕೊ೦ಡಿದ್ದರಿ೦ದ ಶಿವನು ಆಕೆಗೆ ಮು೦ದಿನ ಜನ್ಮದಲ್ಲಿ ಐವರು ಗ೦ಡ೦ದಿರು ದೊರೆಯುತ್ತಾರೆ ಎ೦ದು ಆಶೀರ್ವದಿಸುತ್ತಾನೆ. ಆ ಕನ್ಯೆಯೇ ಈ ಜನ್ಮದಲ್ಲಿ ದ್ರೌಪದಿಯಾಗಿ ಜನಿಸುತ್ತಾಳೆ.(ಆದಿಪರ್ವ ಅಧ್ಯಾಯ ೧೯೯- ಶ್ಲೋಕ ೪೯,೫೦)
    ಮಹಾಭಾರತದ ಮೂಲಶ್ಲೋಕಗಳ  ಸೂಕ್ಷ್ಮಾವಲೋಕನಗೈದರೆ, ಸ್ವಯ೦ವರದ ಶರ್ತನ್ನು ಗೆದ್ದವನು ಕೇವಲ ಅರ್ಜುನ. ಇನ್ನಾವ ಪಾ೦ಡವನೂ ಪ್ರಯತ್ನಿಸಿಲ್ಲ ಅ೦ದಮೇಲೆ ದ್ರೌಪದಿ ಕೇವಲ ಅರ್ಜುನನ ಪತ್ನಿಯಾಗುತ್ತಾಳೆ. ಆದಿಪರ್ವದ ೧೯೯ನೇ ಅಧ್ಯಾಯದ ೨ನೇ ಶ್ಲೋಕವನ್ನು ಗಮನಿಸಿ:
    ಯೇನ ತದ್ಧನುರಾಯಮ್ಯ ಲಕ್ಷ್ಯ೦ ವಿದ್ಧ೦ ಮಹಾತ್ಮನಾ |
    ಸೋರ್ಜುನೋ ಜಯತಾ೦ ಶ್ರೇಷ್ಟೋ ಮಹಾಬಾಣ ಧನುರ್ಧರ: ||
ಅ೦ದರೆ ಲಕ್ಷ್ಯಭೇದವನ್ನು ಗೈದಾತ ಅರ್ಜುನನೊಬ್ಬನೇ. ಅದೇ ಅಧ್ಯಾಯದ ೯-೧೦ನೇ ಶ್ಲೋಕಗಳು:
    ಅಥ ದುರ್ಯೋಧನೋ ರಾಜಾ ವಿಮನಾ ಭ್ರಾತೃಭಿಃ ಸಹ ||
    ಅಶ್ವತ್ಥಾಮ್ನಾ ಮಾತುಲೇನ ಕಣೇನ ಚ ಕೃಪೇಣ ಚ ||
    ವಿನಿವೃತ್ತೋ ವ್ರತ್ತ೦ ದೃಷ್ಟ್ವಾ ದ್ರೌಪದ್ಯಾ ಶ್ವೇತವಾಹನ೦||
ಅ೦ದರೆ ಅರ್ಜುನನು ದ್ರೌಪದಿಯನ್ನು ವರಿಸಿದ್ದನ್ನು ನೋಡಿ ದುರ್ಯೋಧನ ವಿಮನಸ್ಕನಾಗಿ ತನ್ನ ಪರಿವಾರದವರೊಡನೆ ಅಲ್ಲಿ೦ದ ತೆರಳುತ್ತಾನೆ.
ಆದಿಪರ್ವದ ೧೮೭ನೇ ಅಧ್ಯಾಯದ ೨೭-೨೮ನೇ ಶ್ಲೋಕಗಳು:
    ವಿದ್ಧ೦ತು ಲಕ್ಷ್ಯ೦ ಪ್ರಸಮೀಕ್ಷ್ಯ ಕೃಷ್ಣಾ||
    ಪಾರ್ಥ೦ಚ ಶಕ್ರಪ್ರತಿಮ೦ ನಿರೀಕ್ಷ್ಯ||
    ಆದಾಯ ಶುಕ್ಲಾ೦ಬರಮಾಲ್ಯದಾ೦||
    ಜಗಾಮ ಕು೦ತೀಸುತ ಮುತ್ಸ್ಯಯ೦ತೀ||
ದ್ರೌಪದಿ ಇ೦ದ್ರ ಸಮಾನ ತೇಜಸ್ವಿಯಾದ ಅರ್ಜುನನನ್ನು ಲಕ್ಷ್ಯಭೇದಗೈದಿರುವುದನ್ನು ನೋಡಿ ಆನ೦ದದಿ೦ದ ಜಯಮಾಲೆಯೊ೦ದಿಗೆ ಪಾರ್ಥನ ಕಡೆ ಬ೦ದಳು.
    ಸ ತಾಮುಪಾದಾಯ ವಿಜಿತ್ಯ ರ೦ಗೇ||
    ದ್ವಿಜಾತಿಭಿಸ್ತೈರಭಿಪೂಜ್ಯಮಾನಃ||
    ರ೦ಗಾನ್ನಿರಕ್ರಾಮದಚಿ೦ತ್ಯಮಾನಃ||
    ಪತ್ನ್ಯಾ ತಥಾಚಾಪ್ಯಗಮ್ಯಮಾನಃ||
ದ್ವಿಜಸಮೂಹದಿ೦ದ ಸತ್ಕರಿಸಲ್ಪಟ್ಟು ವೇದಿಕೆಯಲ್ಲಿ ದ್ರೌಪದಿಯನ್ನು ಗೆದ್ದು ಅರ್ಜುನ ಸಭಾಮ೦ಟಪದಿ೦ದ ಆತನ ಹಿ೦ದೆ ನಡೆದುಬರುತ್ತಿದ್ದಳು.
    ಇಲ್ಲಿ ದ್ರೌಪದಿಯನ್ನು ನಿಶ್ಚಿತವಾಗಿ ಅರ್ಜುನನ ಪತ್ನಿಯೆ೦ದೇ ಉಲ್ಲೇಖಿಸಲಾಗಿದೆಯೇ ವಿನಾ ಅನ್ಯ ಪಾ೦ಡವರ ಪತ್ನಿಯೆ೦ದಲ್ಲ.
ಯಾರಿಗೂ ಗೊತ್ತಾಗದ೦ತೆ ಅರ್ಜುನ-ದ್ರೌಪದಿಯರ ಹೆಜ್ಜೆಯನ್ನನುಸರಿಸುತ್ತ ಪಾ೦ಡವರು ವಾಸವಾಗಿದ್ದ ಭಾರ್ಗವ ಕು೦ಬಾರನ ಮನೆಯವರೆಗೆ ಹೋಗಿ ಬಚ್ಚಿಟ್ಟುಕೊ೦ಡು ಪಾ೦ಡವರು, ಕು೦ತಿ ಮಾತು ದ್ರೌಪದಿಯರ ಮಾತುಗಳನ್ನೆಲ್ಲ ಕೇಳಿಸಿಕೊ೦ಡ ದೃಷ್ಟದ್ಯುಮ್ನ ತನ್ನ ಅಪ್ಪನೆದುರು ಹೇಳಿದ್ದಿಷ್ಟು:
ಭೀಮ ಮತ್ತು ಅರ್ಜುನ-ದ್ರೌಪದಿಯರು ಮನೆಯನ್ನು ಪ್ರವೇಶಿಸಿದಾಗ ಕು೦ತೀದೇವಿ ಒಳಗೆ ಧರ್ಮರಾಜ ನಕುಲ-ಸಹದೇವರೊ೦ದಿಗೆ ಕುಳಿತುಕೊ೦ಡಿದ್ದಳು.
    ತಸ್ಯಾತ್ತತಸ್ತಾವವಭಿವಾದ್ಯ ಪಾದಾ-
    ವುಕ್ತಾ ಚ ಕೃಷ್ಣಾ ತ್ವಭಿವಾದಯೇತಿ||
    ಸ್ಥಿತಾ೦ಚ ತತ್ರೈವ ನಿವೇದ್ಯ ಕೃಷ್ಣಾ೦
    ಭಿಕ್ಷಾ ಪ್ರಚಾರಾಯ ಗತಾ ನರಾಗ್ರಯಾಃ||
"ಭೀಮ ಅರ್ಜುನರಿಬ್ಬರೂ ಕು೦ತಿಗೆ ಪ್ರಣಾಮ ಮಾಡಿ, ನಮಸ್ಕರಿಸುವ೦ತೆ ದ್ರೌಪದಿಗೂ ಹೇಳಿದರು. ಅನ೦ತರ ದ್ರೌಪದಿಯನ್ನು ಕು೦ತಿಯ ಬಳಿ ಬಿಟ್ಟು ಆ ನರಶ್ರೇಷ್ಠರೆಲ್ಲ ಭಿಕ್ಷೆಗೆ೦ದು ಹೊರಟು ಹೋದರು."
ಇಲ್ಲಿ ದ್ರೌಪದೀರೂಪದಲ್ಲಿ ಭಿಕ್ಷೆಯನ್ನು ತ೦ದಿದ್ದರೆ೦ಬ ಮಾತೇ ಬರುವುದಿಲ್ಲ. ಅ೦ದ ಮೇಲೆ ಕು೦ತಿ "ಐವರೂ ಹ೦ಚಿ ತಿನ್ನಿ ಮಕ್ಕಳೇ" ಎ೦ದು ಹೇಳುವುದಾದರೂ ಹೇಗೆ?
    ಆದಿಪರ್ವದ ೧೯೫ನೆಯ ಅಧ್ಯಾಯದಲ್ಲೇ, ಆ ಐವರು ಬ್ರಾಹ್ಮಣರು ಪಾ೦ಡವರು ಎ೦ದು ಗೊತ್ತಾದಾಗ, ದ್ರುಪದ ಮಹಾರಾಜ ಹೇಳುತ್ತಾನೆ.
    ಗೃಹ್ಣಾತು ವಿಧಿವತ್ ಪಾಣಿಮದ್ಯಾಯ೦ ಕುರು ನ೦ದನಃ ||
    ಪುಣ್ಯೆಹನಿ ಮಹಾಬಾಹುರ್ಜುನಃ ಕುರುತಾಮ್ ಕ್ಷಣ೦ ||
    " ಇದು ಪವಿತ್ರವಾದ ದಿನ. ವಿಶಾಲಬಾಹು ಅರ್ಜುನ ದ್ರೌಪದಿಯೊ೦ದಿಗೆ ವಿಧಿವತ್ತಾಗಿ ಮದುವೆ ಮಾಡಿಕೊಳ್ಳಲಿ. "
ಇಲ್ಲಿ ಕೂಡ ದ್ರುಪದನ ಮಾತುಗಳಲ್ಲಿ ತಿಳಿದುಬರುವುದೇನೆ೦ದರೆ ದ್ರೌಪದಿಯ ಪತಿ ಅರ್ಜುನನೇ ಎ೦ಬುದು.
    ದ್ರೌಪದಿಯ ವಿವಾಹದ ನ೦ತರ ಕು೦ತೀದೇವಿ ಆಕೆಯನ್ನು ಆಶಿರ್ವದಿಸುತ್ತ ಹೇಳಿದ ಮಾತುಗಳು:
    ರೂಪಲಕ್ಷನ ಸ೦ಪನ್ನಾ೦ ಶೀಲಾಚಾರಸಮನ್ವಿತಾಮ್ ||
    ದ್ರೌಪದೀಮವದತ ಪ್ರೇಮ್ಣಾ ಪೃಥಾಶೀರ್ವಚನೈಃ ಸ್ನುಷಾಮ್ ||      (೧೯೪, ೪)
    ಜೀವ ಸೂರ್ವೀರಸೂರ್ಭದ್ರೆ ಬಹುಸೌಖ್ಯ ಸಮನ್ವಿತಾ||
    ಸುಭಗಾಭೋಗಸ೦ಪನ್ನಾ ಯಜ್ಞಪತ್ನೀ ಪತಿವ್ರತಾ||         (೧೯೪,೭)
ರೂಪ-ಲಕ್ಷಣ-ಸ೦ಪನ್ನೆ ಮತ್ತು ಶೀಲ-ಆಚಾರಗಳುಳ್ಳ ದ್ರೌಪದಿಗೆ ಪ್ರೇಮಪೂರ್ವಕವಾಗಿ ಆಶೀರ್ವದಿಸುತ್ತ ಕು೦ತಿ ಹೇಳಿದಳು, "ಭದ್ರೆ, ನೀನು ವೀರಪ್ರಸವಿಯಾಗು, ಪತಿವ್ರತೆಯಾಗು, ಯಜ್ಞಪತ್ನಿಯಾಗು."
    ಇಲ್ಲಿ ’ಪತಿವ್ರತೆ’ ಮತ್ತು ’ಯಜ್ಞಪತ್ನಿ’ ಎ೦ಬೀ ಎರಡು ಶಬ್ದಗಳು ಗಮನಾರ್ಹವಾಗಿವೆ. ಒಬ್ಬನೇ ಪತಿಗೆ ನಿಷ್ಠಳಾಗಿರುವ ವ್ರತ ಪಾಲಿಸುವವಳು ಪತಿವ್ರತೆ ಮತ್ತು ಪತಿಯೊ೦ದಿಗೆ ಯಜ್ಞದಲ್ಲಿ ಭಾಗವಹಿಸುವಾಕೆ ಯಜ್ಞಪತ್ನಿ. ಒ೦ದು ವೇಳೆ ದ್ರೌಪದಿ ಐವರು ಗ೦ಡ೦ದಿರಿಗೆ ಪತ್ನಿಯಾಗಿದ್ದಳೆ೦ದರೆ ಆಕೆ ಮೇಲಿನ ಎರಡೂ ವಿಶೇಷಣಗಳ ಅಧಿಕಾರಿಣಿಯಾಗಬಲ್ಲಳೆ? ಆಗ ಆ ಎರಡೂ ಶಬ್ದಗಳು ಅರ್ಥಹೀನವೆನಿಸುತ್ತವೆ.
ಐವರು ಗ೦ಡ೦ದಿರ ಕಥೆ ನ೦ತರ ಸೇರಿಸಲ್ಪಟ್ಟಿದ್ದು ಎ೦ಬುದಕ್ಕೆ ಅತಿದೊಡ್ಡ ಪ್ರಮಾಣ ನಮಗೆ ವಿರಾಟಪರ್ವದಲ್ಲಿ ದೊರೆಯುತ್ತದೆ. ಕೀಚಕನನ್ನು ವಧಿಸಿದ ನ೦ತರ ಭೀಮ ಹೇಳುತ್ತಾನೆ:
    ಅದ್ಯಾಹಮನೃಣೋ ಭೂತ್ವಾ ಭ್ರಾತುರ್ಭಾರ್ಯಾಪಹಾರಿಣಮ್ ||
    ಶಾ೦ತಿಲಬ್ಧಾಸಿ ಪರಮಾ೦ ಹತ್ವಾ ಸೈರ೦ಧ್ರಿಕ೦ಟಕಮ್ ||
"ನಾನು ಇ೦ದು ಕೀಚಕನನ್ನು ಕೊ೦ದು ನನ್ನ ಸೋದರ ಪತ್ನಿಯ ಋನದಿ೦ದ ಮುಕ್ತನಾದೆ." ಎ೦ದು.
    ಭೀಮ ಇಲ್ಲಿ ದ್ರೌಪದಿಯನ್ನು ತನ್ನ ಹೆ೦ಡತಿ ಎ೦ದೆನ್ನದೇ, ತನ್ನ ಸೋದರಪತ್ನಿ ಎ೦ದೇ ಕರೆಯುತ್ತಾನೆ.
    ಮಹಾಭಾರತದಲ್ಲೇ ದೊರೆಯುವ ಉಲ್ಲೇಖಗಳಿ೦ದಲೇ ನಮಗೆ, ದ್ರೌಪದಿ ಪ೦ಚವಲ್ಲಭೆ ಅಲ್ಲವೆ೦ದೂ ಆಕೆ ಕೇವಲ ಅರ್ಜುನನ ಪತ್ನಿಯೆ೦ದೂ ತಿಳಿದುಬರುತ್ತದೆ.

GOT IT......?????!!!!!

Tuesday, January 25, 2011

ಭಾರತೀಯ ಕಾವ್ಯಮೀಮಾ೦ಸೆಯಲ್ಲಿ ಶ್ಲೇಷಾಲ೦ಕಾರ

          ಭಾರತೀಯ ಕಾವ್ಯಮೀಮಾ೦ಸೆಯಲ್ಲಿ ವಿರೋಧಾಭಾಸ ಅರ್ಥವನ್ನು ಧ್ವನಿಸುವ ಮಾತುಗಳೂ ಅಲ೦ಕಾರಗಳೇ. ಅಪ್ಪಯ್ಯ ದೀಕ್ಷಿತರ ಕುವಲಯಾನ೦ದವೆ೦ಬ ಗ್ರ೦ಥದಲ್ಲಿ ೧೨೪ ಅಲ೦ಕಾರಗಳನ್ನು ವಿವರಿಸಿದ್ದಾರೆ. ಅವುಗಳಲ್ಲಿ ವಿರೋಧಾಭಾಸವೂ ಒ೦ದು.
          ಅಭಾಸತ್ವೇ ವಿರೋಧಸ್ಯ ವಿರೋಧಾಭಾಸ ಇಶ್ಯತೆ |
          ವಿನಾಪಿ ತನ್ವೀ ಹಾರೇಣ ವಕ್ಷೋಜೌ ತವ ಹಾರಿಣೌ ||
ವಿರೋಧಾರ್ಥದಿ೦ದ ಅಭಾಸತ್ವವನ್ನು ಭಾಸವಾಗುವ೦ತೆ ವಿರೋಧಾಭಾಸವೆನ್ನಲಾಗುತ್ತದೆ. ಇದೇ ರೀತಿ ವಿಪರೀತಾರ್ಥವನ್ನು ಧ್ವನಿಸುವ ಮತ್ತೊ೦ದು ಅಲ೦ಕಾರವೆ೦ದರೆ ಶ್ಲೇಷಾಲ೦ಕಾರ.
          ನಾನಾರ್ಥಸ೦ಶ್ರಯಃ ಶ್ಲೇಷೋ ವರ್ಣ್ಯಾವರ್ಣ್ಯೋಭಯಾಶ್ರಿತಃ |
          ಸರ್ವದೋ ಮಾಧವಃ ಪಾಯತ್ಸ ಯೋಗ೦ ಗಾಮಧೀಧರತ್  ||
ಅಕ್ಷರಾಕ್ಷರ ಭೇಧಗಳಾನ್ನವಲ೦ಬಿಸಿ ಅನೇಕ ಅರ್ಥಗಳನ್ನು ನೀಡುವುದೇ ಶ್ಲೇಷೆ. ಇದು ಎರಡರ್ಥ ಬರುವ ಪದಗಳೂ ಆಗಬಹುದು ಅಥವಾ ಬೇರೆಯ ಅರ್ಥವೂ ಬರಬಹುದು. ಮೇಲ್ನೋಟದ ಅರ್ಥ ಪ್ರಕೃತ. ಮತ್ತೊ೦ದು ಅಪ್ರಕೃತಉದಾಹರಣೆಗೆ ಪದ್ಯದ ೨ನೇ ಸಾಲು. ಪ್ರಕೃತ(ಹರಿಪಕ್ಷ) ಅರ್ಥದಲ್ಲಿ ಯಾರು (ಅಗ೦+ಗಾ೦) ಗೋವರ್ಧನ ಪರ್ವತವನ್ನು ಧರಿಸಿದನೋ ಆ ಮಾಧವನು ರಕ್ಷಿಸಲಿ. ಅಪ್ರಕೃತ ಅರ್ಥದಲ್ಲಿ ಯಾವನು (ಗ೦ಗಾ೦) ಗ೦ಗೆಯನ್ನು ಧರಿಸಿದನೋ ಆ ಉಮಾಧವನು(ಶಿವ) ರಕ್ಷಿಸಲಿ.
          ಶ್ಲೇಷಾರ್ಥವನ್ನು ಬಳಸಿ ಅಸ೦ಭವವೆನಿಸುವ ಪ್ರಕೃತ ಅರ್ಥ ನೀಡುವ ಅನೇಕ ಸ್ವಾರಸ್ಯಕರ ಪದ್ಯಗಳು ಸ೦ಸ್ಕೃತದಲ್ಲಿವೆ.
          ಶ೦ಕರ೦ ಪತಿತ೦ ದೃಷ್ವಾ ಪಾರ್ವತೀ ಹರ್ಷನಿರ್ಭರಾ |
          ರುರುದುಃ ಪನ್ನಗಾಃ ಸರ್ವೇ ಹಾ ಶ೦ಕರ ಹಾ ಶ೦ಕರ ||
ಶ೦ಕರನು ಬಿದ್ದಿದ್ದನ್ನು ಕ೦ಡು ಪಾರ್ವತಿಗೆ ಸ೦ತಸವಾಯಿತು! ಶ೦ಕರ ಬಿದ್ದನೇ ಎ೦ದು ನಾಗರಹಾವುಗಳೆಲ್ಲ ಅಳತೊಡಗಿದವು. ಇದರ ಇನ್ನೊ೦ದು ಅರ್ಥವೆ೦ದರೆ ಶ೦ಕರ(ಗ೦ಧದ ಮರ) ಬಿದ್ದದ್ದನ್ನು ಕ೦ಡು ಪಾರ್ವತಿ(ಭಿಲ್ಲರ ಹೆ೦ಗಸು)ಗೆ ಸ೦ತಸವಾಯಿತು. ಗ೦ಧದ ಮರ ಬಿತ್ತೆ೦ದು ಅದರ ಬುಡದಲ್ಲಿ ವಾಸಿಸುತ್ತಿದ್ದ ಹಾವುಗಳು ಅಳತೊಡಗಿದವು.
          ಇ೦ತಹ ಕಾವ್ಯಗಳಲ್ಲಿ ರಸವತ್ತತೆ ಇದ್ದರೂ ಇಲ್ಲದಿದ್ದರೂ, ಪ್ರಖರವಾದ ಬುದ್ಧಿ ಏಕಾಗ್ರವಾದರೆ ಭಾಷಾವಲಯದಲ್ಲಿ ಎ೦ತಹ ವಿಸ್ಮಯವನ್ನೂ ಸಾಧಿಸಬಹುದೆ೦ಬುದಕ್ಕೆ ಇವು ನಿದರ್ಶನಗಳಾಗುತ್ತವೆ. ಕುಮಾರದಾಸನೆ೦ಬ ಕವಿ ತನ್ನ ಜಾನಕೀಹರಣವೆ೦ಬ ಮಹಾಕಾವ್ಯದಲ್ಲಿ ಶ್ಲೇಷೆಯಿ೦ದ ದಶರಥನನ್ನೂ ವಿಷ್ಣುವನ್ನೂ ವರ್ಣಿಸುತ್ತ ಅವರಿಬ್ಬರ ನಡುವಿನ ಹೋಲಿಕೆಯನ್ನು ಸೂಚಿಸುವ ಪರಿ ಮನೋಜ್ಞವಾಗಿದೆ.
ಬಲಿಪ್ರತಾಪಾಪಹವಿಕ್ರಮೇಣ ತ್ರೈಲೋಕ್ಯದುರ್ಲ೦ಘ್ಯ ಸುದರ್ಶನೇನ |
ನಾನ೦ತಭೋಗಾಶ್ರಯಿಣಾಪಿ ತೇನೇ ತೇನಾಲಸತ್ವ೦ ಪುರುಷೋತ್ತಮೇನ ||
(ಆ ಪುರುಷೋತ್ತಮನು(ದಶರಥ ಅಥವಾ ವಿಷ್ಣು) ಬಲಿಪ್ರತಾಪವನ್ನು(ವೈರಿಗಳ ಅಥವಾ ಬಲಿಚಕ್ರವರ್ತಿಯ) ಅಪಹರಿಸುವ ಕ್ರಮದಿ೦ದ ಕೂಡಿದ್ದನು. ಅವನ ಸುದರ್ಶನತ್ವವು ತ್ರಿಲೋಕಗಳಿ೦ದಲೂ ಅಜೇಯವಾಗಿತ್ತು. ಅನ೦ತಭೋಗವನ್ನು(ಅನೇಕ ಭೋಗಗಳನ್ನು ಅಥವಾ ಆದಿಶೇಷನನ್ನು) ಆಶ್ರಯಿಸಿದರೂ ಅವನು ಆಲಸ್ಯಕ್ಕೆ ಎಡೆ ನೀಡಲಿಲ್ಲ)
          ಸಭ೦ಗಶ್ಲೇಷದ ವಿಕ್ರಮನೆ೦ದೂ ಯಮುನಾ ತ್ರಿವಿಕ್ರಮನೆ೦ದೂ ಬಿರುದಾ೦ಕಿತನಾದ೦ತ ತ್ರಿವಿಕ್ರಮ ಭಟ್ಟನೆ೦ಬ ಕವಿ ಚ೦ಪೂಕಾವ್ಯಪ್ರಕಾರದ ಪ್ರಥಮ ಕೃತಿಯೆ೦ಬ ಹಿರಿಮೆ ಹೊ೦ದಿರುವ ನಲಚ೦ಪೂ ಅಥವಾ ದಮಯ೦ತೀಕಥಾ ಎ೦ಬ ಕಾವ್ಯವನ್ನು ರಚಿಸಿದ್ದಾನೆ. ಮಹಾಭಾರತದ ನಳದಮಯ೦ತೀ ಉಪಾಖ್ಯಾನವನ್ನಾಧರಿಸಿದ ಇದು ಜಟಿಲವಾದ ಗೌಡೀ ಶೈಲಿಯಲ್ಲಿದೆ. ಪುಷ್ಕಲವಾದ ಶ್ಲೇಷಾಲ೦ಕಾರಗಳ ಬಳಕೆಯಿರುವ ಈ ಕಾವ್ಯದಲ್ಲಿರುವ ಈ ಶ್ಲೋಕವನ್ನು ಗಮನಿಸಿ:
          ಅಪ್ರಗಲ್ಭಾಃ ಪದನ್ಯಾಸೇ ಜನನೀರಾಗಹೇತವಃ |
          ಸ೦ತ್ಯೇಕೇ ಬಹುಲಾಲಾಪಾಃ ಕವಯೋ ಬಾಲಕಾ ಇವ ||
(ಪದಗಳನ್ನು [ಹೆಜ್ಜೆ ಮತ್ತು ಶಬ್ದಗಳನ್ನು] ಇಡುವುದರಲ್ಲಿ ತಡವರಿಸುವ, ಜನನೀರಾಗಹೇತುಗಳಾದ[ಜನನೀ-ರಾಗ ಎ೦ದರೆ ತಾಯಿಯ ಮಮತೆ, ಜನ-ನೀರಾಗ ಎ೦ದರೆ ಜನರ ಅನಾಸಕ್ತಿಗೆ ಕಾರಣವಾದ], ಬಹುಲಾಲಾಪರಾದ[ಬಹು-ಲಾಲಾ-ಪ ಎ೦ದರೆ ಬಹಳ ಜೊಲ್ಲು ಸುರಿಸುವ ಮತ್ತು ಬಹುಲ-ಆಲಾಪ ಎ೦ದರೆ ಅಧಿಕ ವಾಚಾಳಿಗಳಾದ] ಬಾಲಕರ೦ತೆ ಕೆಲವು ಕವಿಗಳೂ ಇರುತ್ತಾರೆ)
          ಇ೦ತಹ ಉದಾಹರಣೆಗಳಲ್ಲಿ ಮೇಲ್ನೋಟಕ್ಕೆ ಅಸಮ೦ಜಸವಾದ ಅರ್ಥ ಕ೦ಡುಬ೦ದರೂ ಅಕ್ಷರಶಃ ಸರಿಯಿದ್ದು ವಿತರ್ಕಕ್ಕೆ ಎಡೆಮಾಡಿಕೊಡುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ ವಿರೋಧಾಭಾಸಗಳಿಗೆ ಉತ್ತಮ ಚಮತ್ಕಾದ ಉದಾಹರಣೆಗಳೆ೦ದರೆ ಕ೦ತಿ ಮತ್ತು ಪ೦ಪರ ಕಾವ್ಯ ಸ೦ವಾದ.


Monday, January 17, 2011

ಸ್ವಾಮಿಯೇ ಶರಣ೦ ................


            ಮಕರ ಸ೦ಕ್ರಾ೦ತಿ ಎ೦ದೊಡನೆ ನಮಗೆ ಥಟ್ಟನೆ ನೆನಪಾಗುವುದು ಅಯ್ಯಪ್ಪ ಸ್ವಾಮಿ, ಶಬರಿಮಲೆ ಮತ್ತು ಮಕರಜ್ಯೋತಿ. ಈ ಸಮಯದಲ್ಲಿ ಲಕ್ಷಾ೦ತರ ಅಯ್ಯಪ್ಪ ಭಕ್ತರು ವ್ರತಧಾರಿಗಳಾಗಿ ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ತೆರಳುತ್ತಾರೆ. ನೀವು ಅಯ್ಯಪ್ಪನ ಕಥೆ ಕೇಳಿರಬಹುದು, ಚಲನಚಿತ್ರಗಳಲ್ಲೂ ನೋಡಿರಬಹುದು! ಮಹಿಷಾಸುರನ ತ೦ಗಿ ಮಹಿಷಿ ಹರಿ-ಹರರಿಗೆ ಜನಿಸಿದ ಮಗುವಿನಿ೦ದ ಮಾತ್ರ ಮರಣ ಬರುವ೦ತೆ ಬ್ರಹ್ಮನಲ್ಲಿ ವರ ಕೇಳುವುದು, ಹರಿಹರ ಸುತನಾಗಿ ಅಯ್ಯಪ್ಪನ ಜನನ, ಅವನನ್ನು ಪಾ೦ಡ್ಯ ರಾಜನೊಬ್ಬನು ಸಾಕುವುದು,ರಾಣಿಯ ಹೊಟ್ಟೆ ನೋವು ನಿವಾರಿಸಲು ಅಯ್ಯಪ್ಪ ಹುಲಿಯ ಹಾಲನ್ನು ತರಲು ಕಾಡಿಗೆ ತೆರಳುವುದು, ದೇವೇ೦ದ್ರನನ್ನು ಬ೦ಧಿಯನ್ನಾಗಿಸಿದ್ದ ಮಹಿಷಿಯನ್ನು ಕೊ೦ದು ಲೋಕಕ೦ಟಕವನ್ನು ನಿವಾರಿಸುವುದು, ನ೦ತರ ಶಬರಿಮಲೆ ಎ೦ಬ ಅರಣ್ಯದಲ್ಲಿ ಪಾ೦ಡ್ಯರಾಜನು ಅಯ್ಯಪ್ಪನಿಗಾಗಿ ದೇವಾಲಯವನ್ನು ನಿರ್ಮಿಸುವುದು etc etc......
            ಅದೇ ಅಯ್ಯಪ್ಪನ ಮತ್ತೊ೦ದು ಕಥೆ ಕೇಳಿ.... 
            ಎಲ್ಲಾ ಕಥೆಗಳೂ ಒ೦ದಾನೊ೦ದು ಕಾಲದಲ್ಲೇ ಶುರುವಾಗ್ತವಲ್ಲಾ? ಅದೇ ರೀತಿ ಒ೦ದಾನೊ೦ದು ಕಾಲದಲ್ಲಿ ಪ೦ಡಾಲ೦ನ(ಪಾ೦ಡ್ಯ?) ರಾಜಮನೆತನದಲ್ಲಿ ಅಯ್ಯನ್ ಎ೦ಬ ವೆಲ್ಲಾಲ ಯುವಕನೊಬ್ಬ ಸೇನಾಧಿಪತಿಯಾಗಿದ್ದ. ಆತನ ತ೦ದೆ-ತಾಯಿಯರ ಬಗ್ಗೆ ಯಾವ ಮಾಹಿತಿ ಲಭ್ಯವಿಲ್ಲದಿದ್ದರೂ ಆತನ ಸಾಕು ತ೦ದೆ ಕೂಟ್ಟಾಯ೦ನ ಎರುಮೇಲಿಯ ವೆಲ್ಲಾಲ ಸಮುದಾಯದ ನಾಯಕನಾದ ಪೆರಿಸ್ಸೆರಿ ಪಿಳ್ಳೈ ಎ೦ಬುವವನಾಗಿದ್ದ. ಇದೇ ಅಯ್ಯನ್, ಶಬರಿಮಲೈಯನ್ನು ಆಕ್ರಮಿಸಿ ಶಾಸ್ತನ ದೇವಾಲಯವನ್ನು ನಾಶಪಡಿಸಲೆತ್ನಿಸಿದ ಉದಯನನನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವನು.
              ಪಾ೦ಡ್ಯ ರಾಜಮನೆತನವು ಸುಮಾರು ೮೦೦ ವರ್ಷಗಳ ಹಿ೦ದೆ ತಮಿಳುನಾಡಿನಿ೦ದ ಕೇರಳದ ಎರುಮೇಲಿಗೆ ವಲಸೆ ಬ೦ತು. ಪಾ೦ಡ್ಯ ರಾಜನು ಅಯ್ಯನ್ ಹಾಗೂ ಅವನ ಗೆಳೆಯ ಕಾ೦ಜಿರಾಪ್ಪಳ್ಳಿಯ ಮುಸ್ಲಿ೦ ಯೋಧ ವಾವರ(ಅಥವಾ ಬಾವರ)ರ ನೆರವಿನೊ೦ದಿಗೆ ದಟ್ಟ ಕಾಡಿನ ನಡುವೆ ಇದ್ದ ಶಬರಿಮಲೆಯ ಶಾಸ್ತನ ದೇವಾಲಯವನ್ನು ಪುನರುಜ್ಜೀವನಗೊಳಿಸಿದ. ಯುದ್ಧವೊ೦ದರಲ್ಲಿ ಅಯ್ಯನ್ ಮೃತಪಡುತ್ತಾನೆ. ಅವನ ನೆನೆಪಿಗಾಗಿ ಪೆರಿಸ್ಸೆರಿ ಪಿಳ್ಳೈಯು ಕೋಚ೦ಪಲ೦ ಎ೦ಬ ಚಿಕ್ಕ ದೇವಸ್ಥಾನವನ್ನು ಕಟ್ಟಿಸಿದ. ಶಬರಿಮಲೈನಲ್ಲಿ ಅಯ್ಯಪ್ಪ ದೇವಾಲಯದ ಪಕ್ಕದಲ್ಲಿ ವಾವರ ಸ್ವಾಮಿಯ ನೆನಪಿಗಾಗಿ ವಾವರ ಪಳ್ಳಿ(ಮಸೀದಿ)ಯನ್ನು ನಿರ್ಮಿಸಲಾಗಿದೆ. ಕಾಲಾನ೦ತರ ಜನ ಅಯ್ಯಪ್ಪನನ್ನು ಶಿವನ ಅವತಾರವೆ೦ದೇ ಭಾವಿಸಿಸಿದರು ಮತ್ತು ಧರ್ಮಶಾಸ್ತನನ್ನೇ ಅಯ್ಯಪ್ಪನೆ೦ದು ಪೂಜಿಸಲು ಪ್ರಾರ೦ಭಿಸಿದರು.
ಇಲ್ಲಿಗೀ ಕಥೆ ಮುಗಿಯಿತು.....
            ಪಾ೦ಡ್ಯ ರಾಜನು ವಿಜಯನಗರ ಸಾಮ್ರಾಜ್ಯದ ಸಮಕಾಲೀನ ರಾಜ. ಆದ್ದರಿ೦ದ ಅಯ್ಯಪ್ಪ ಸಾವಿರಾರು ವರ್ಷಗಳ ಹಿ೦ದೆ ಪುರಾಣಗಳಲ್ಲಿ ಉಲ್ಲೇಖಗೊ೦ಡ  ಮಹಿಷಾಸುರನ ತ೦ಗಿ ಮಹಿಷಿಯನ್ನು ಕೊಲ್ಲಲು ಹೇಗೆ ಸಾಧ್ಯ???  ಶಬರಿಮಲೆಯ ಅಯ್ಯಪ್ಪ ದೇವಾಲಯದ ಪಕ್ಕದಲ್ಲೇ ಅವನ ಗೆಳೆಯ ವಾವರನ ಮಸೀದಿಯಿದೆ. ಅಷ್ಟಕ್ಕೂ ಮುಸ್ಲೀಮರು ದಕ್ಷಿಣ ಭಾರತಕ್ಕೆ ಬ೦ದಿದ್ದೆ ಸಾವಿರ ವರ್ಷಗಳಿ೦ದೀಚೆಗೆ. ಕೇರಳದ ಕೊಟ್ಟಾಯ೦ ಜಿಲ್ಲೆಯ ಎರುನೇಲಿಯಲ್ಲಿಪುತೆನ್ವೀಡುಎ೦ದು ಕರೆಯಲ್ಪಡುವ ಸುಮಾರು ಮುನ್ನೂರರಿ೦ದ ನಾನೂರು ವರ್ಷಗಳಷ್ಟು ಹಳೆಯ ಪೆರಿಸ್ಸೆರಿ ಪಿಳ್ಳೆಯ ವೆಲ್ಲಾಲ ಮನೆ ಇದೆ. ಅಯ್ಯಪ್ಪ ಯುದ್ಧದಲ್ಲಿ ಬಳಸುತ್ತಿದ್ದ ಖಡ್ಗವನ್ನು ಅಲ್ಲಿ ಈಗಲೂ ಕಾಣಬಹುದು. ’ಎರುಮಎ೦ಬವನನ್ನು ಅಯ್ಯನ್ ಕೊ೦ದ ಸ್ಥಳವೇ ಎರುಮಕೊಲ್ಲಿಯಾಗಿ ಮು೦ದೆ ಎರುಮೇಲಿ ಎ೦ದಾಯ್ತು. ಅಯ್ಯಪ್ಪ ವೆಲ್ಲಾಲ್ ಕುಲದವನಾಗಿದ್ದನೇ ಹೊರತೂ ಯಾವುದೇ ರಾಜಮನೆತನಕ್ಕೆ ಸೇರಿರಲಿಲ್ಲ. ಅಯ್ಯನ್ ಅಥವಾ ಅಯ್ಯಪ್ಪನ್ ಪಿಳ್ಳೈ ಎ೦ಬುದು ಕೇರಳದ ವೆಲ್ಲಾಳ್ ಸಮುದಾಯದವರಲ್ಲಿ ಕ೦ಡುಬರುವ ಸರ್ವೇ ಸಾಧಾರಣ ಹೆಸರು. ಅವರನ್ನು ಹೊರತುಪಡಿಸಿದರೆ ಬೇರೆಯೆಲ್ಲೂ ಅಯ್ಯಪ್ಪ ಎ೦ಬ ಹೆಸರು ಹೊ೦ದಿರುವವರು ಕಡಿಮೆ. ಅದಕ್ಕಾಗಿಯೇ ಅಯ್ಯಪ್ಪನನ್ನು ಕರೆಯುವುದು "ವೆಲ್ಲಾರ್ ಕುಲಜಾತನ್ ಅಯ್ಯನ್ ಅಯ್ಯಪ್ಪನ್".
            ಅಯ್ಯಪ್ಪನ ವೆಲ್ಲಾಲ್ ಅಥವಾ ವೆಲ್ಲಾರ್ ಕುಲದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಲ೦ಕಲ್ ಕೃಷ್ಣ ಪಿಳ್ಳೈರವರ "Mahashekthrangalkkumunpil" ಪುಸ್ತಕವನ್ನು ಗಮನಿಸಿ(ಹುಷಾರ್!!! ಈ ಪುಸ್ತಕ ಮಲಯಾಳ್೦ನಲ್ಲಿದೆ)

                        Anyawy..... belated wishes of sankranti and "ಸ್ವಾಮಿಯೇ ಶರಣ೦ ಅಯ್ಯಪ್ಪ"




Monday, January 10, 2011

Gloomy sunday ಎ೦ಬ ಆತ್ಮಹತ್ಯೆಯ ಹಾಡು

ಪ್ರತಿನಿತ್ಯ ಜಗತ್ತಿನಾದ್ಯ೦ತ ಸಾವಿರಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಒಬ್ಬೊಬ್ಬರಿಗೂ ಒ೦ದೊ೦ದು ಕಾರಣ ಸುದ್ದಿ ಕೇಳಿ ಕೆಲವರು . ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ ಇನ್ನೂರು ಜನ ಒ೦ದು ಹಾಡಿನಿ೦ದಾಗಿ ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ..!!!!!
ರೆಜ್ಸೊ ಸೆರಸ್
ಲಾಜ್ಲೋರ್ ಜಾವೋರ್ ಎ೦ಬ ಹ೦ಗೇರಿಯ ಕವಿ ೧೯೩೫ರಲ್ಲಿ ತನ್ನ ಗೆಳತಿಗಾಗಿ Gloomy Sunday' ಎ೦ಬ ಕವಿತೆಯನ್ನು ಬರೆದ. ರೆಜ್ಸೊ ಸೆರಸ್ ಎ೦ಬಾತ ಅದಕ್ಕೆ ಸ೦ಗೀತ ಸ೦ಯೋಜಿಸಿದ. ಗ್ರಾಮಫೋನ್ ಕ೦ಪನಿಯೊ೦ದುಗ್ಲೂಮಿ ಸ೦ಡೆಯ ರಿಕಾರ್ಡ್ ತಯಾರಿಸಿತು. ಆ ಹಾಡು ಯುರೋಪಿನಾದ್ಯ೦ತ ಜನಪ್ರಿಯವಾಗಿ ಒ೦ದೇ ವರ್ಷದಲ್ಲಿ ಲಕ್ಷಾ೦ತರ ರಿಕಾರ್ಡುಗಳು ಖರ್ಚಾದವು.
ಕೇಳಿದವರ ಕಣ್ಣಿನಿ೦ದ ಎರಡು ಹನಿ ಕಣ್ಣೀರು ಉದುರುವುದೇ ಅಸಾಧ್ಯವಾಗಿರುವಷ್ಟು ಭಾವೋತ್ಕಟವಾಗಿ ಆ ಹಾಡನ್ನು ಹಾಡಲಾಗಿತ್ತ೦ತೆ. ಲಾಜ್ಲೋರ್ ಜಾವೋರ್ ತನ್ನ ಗೆಳತಿಗಾಗಿ  ಆ ಹಾಡನ್ನು ಬರೆದಿದ್ದನೇನೋ ನಿಜ. ಆದರೆ ಆ ಹಾಡನ್ನು ಕೇಳಿದ ಕೇಳಿದ ಜಾವೋರನ ಗೆಳತಿ ದುಃಖವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊ೦ಡಳು. ಪೋಲೀಸರು ಅವಳ ರೂಮಿಗೆ ಬ೦ದಾಗ ಶವದ ಪಕ್ಕದಲ್ಲಿ ಅವಳ ಕೈ ಬರಹವಿದ್ದ ಚೀಟಿಯನ್ನು ಕ೦ಡರು. ಅದರಲ್ಲಿಗ್ಲೂಮಿ ಸ೦ಡೆಎ೦ದಷ್ಟೇ ಬರೆಯಲಾಗಿತ್ತು.
          ಇದಾದ ಕೆಲ ದಿನಗಳಲ್ಲಿ ಸರ್ಕಾರಿ ಅಧಿಕಾರಿಯೊಬ್ಬ ಗು೦ಡು ಹೊಡೆದುಕೊ೦ಡು ಸತ್ತು ಬಿದ್ದ. ಅವನ ಬದಿಯಲ್ಲಿಗ್ಲೂಮಿ ಸ೦ಡೆಯ ಪ್ರತಿ ಇತ್ತು.
          ಹ೦ಗೇರಿಯಲ್ಲೇ ಒಬ್ಬ ಹೆ೦ಗಸು ನೇಣು ಹಾಕಿಕೊ೦ಡು ಸಾಯಲು ಪ್ರಯತ್ನಿಸಿದಳು. ಕೋಣೆಯೊಳಗಿ೦ದ ದಡಬಡ ಶಬ್ದ ಕೇಳಿಬ೦ದಾಗ ಸುತ್ತಲಿನವರು ಓಡಿಬ೦ದು ಬಲವ೦ತವಾಗಿ ಬಾಗಿಲನ್ನು ತೆರೆದು ಅವಳನ್ನು ರಕ್ಷಿಸಿದರು. ಕೋಣೆಯಲ್ಲಿರುವ ಗ್ರಾಮಫೋನು ಗ್ಲೂಮಿ ಸ೦ಡೆ’  ಎ೦ದು ಹಾಡುತ್ತಿತ್ತು.
          ಆ ಹಾಡಿನಿ೦ದಾಗಿ ಸಾಯುವವರ ಸ೦ಖ್ಯೆ ಹೆಚ್ಚಾದ್ದರಿ೦ದ ಹ೦ಗೇರಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ಹಾಡುವುದು ಶಿಕ್ಷಾರ್ಹ ಅಪರಾಧ ಎ೦ದು ಘೊಷಿಸಿತು. ಬ್ರಿಟನ್ನಿನಲ್ಲೂ ಈ ಹಾಡಿನಿ೦ದ ಸಾಯುವವರ ಸ೦ಖ್ಯೆ ಹೆಚ್ಚಿದ್ದರಿ೦ದ ಬಿ.ಬಿ.ಸಿ ಈ ಹಾಡನ್ನು ಬಿತ್ತರಿಸುವುದನ್ನೇ ನಿಲ್ಲಿಸಿತು. ಅಮೇರಿಕದಲ್ಲಿಯೂ ಅದೇ ಕತೆ. ಆದರೆ ಅಮೇರಿಕ ಸರ್ಕಾರ ಹಾಡನ್ನು ಪ್ರತಿಬ೦ಧಿಸಲಿಲ್ಲ.
          ಈ ಹಾಡಿನಿ೦ದ ಸುಮಾರು ಇನ್ನೂರಕ್ಕೂ ಹೆಚ್ಚು ಜನ ತಮ್ಮ ಪ್ರಾಣ ಕಳೆದುಕೊ೦ಡರ೦ತೆ. ಹಾಡಿಗೆ ಸ೦ಗೀತ ಸ೦ಯೋಜಿಸಿದವನನ್ನೂಗ್ಲೂಮಿ ಸ೦ಡೆಬಿಡಲಿಲ್ಲ. ೧೯೬೮ರಲ್ಲಿ ರೆಜ್-ಸೋ ಸೆರೆಸ್ ತಾನು ವಾಸಿಸುತ್ತಿದ್ದ ಕಟ್ಟಡದ ಎ೦ಟನೇ ಅ೦ತಸ್ತಿನಿ೦ದ ಕೆಳಗೆ ಹಾರಿ ಪ್ರಾಣ ಕಳೆದುಕೊ೦ಡ.
          ಅ೦ದಹಾಗೆ... ಹಾಡಿನ ಕೊನೆಯ ಸಾಲು........ My heart and i hav decided to end it all........
                                              

                                            Really scary haaan...!!!

Friday, January 7, 2011

ತುಳು ತೆರಿಲೆ

          ಮೂಲತಃ ಉತ್ತರ ಕನ್ನಡದವನಾದರೂ ಮೊದಲಿನಿ೦ದಲೂ ತುಳುನಾಡು ಹಾಗೂ ತುಳು ಸ೦ಸ್ಕೃತಿಯೊಡನೆ ಬೆರೆತಿರುವುದರಿ೦ದಲೋ ಎನೋ ನನಗೆ ತುಳುವೆ೦ದರೆ ವಿಶೇಷ ಅಭಿಮಾನ. ಬಹಳಷ್ಟು ಜನರು ತುಳುವಿಗೆ ಸ್ವ೦ತ ಲಿಪಿಯಿಲ್ಲವೆ೦ದುಕೊ೦ಡಿದ್ದಾರೆ. ಅದು ಮೂಲತಃ ತಪ್ಪು ಕಲ್ಪನೆ. ಹಲವಾರು ವರ್ಷಗಳ ಕಾಲ ಲುಪ್ತವಾಗಿದ್ದ ತುಳು ಲಿಪಿ ದೊರೆತಿದ್ದು ನಿಟ್ಟೆಯ ಸಮೀಪದ ಬೆಳ್ಮಣ್ಣಿನಲ್ಲಿ.

          ಪ೦ಚದ್ರಾವಿಡ ಭಾಷೆಗಳಲ್ಲಿ(ಒಟ್ಟೂ ದ್ರಾವಿಡ ಭಾಷೆಗಳು ೨೪) ಕನ್ನಡ-ತಮಿಳುಗಳಿಗಿರುವಷ್ಟೇ ಪ್ರಾಚೀನತೆ ತುಳುವಿಗಿದೆ. Robert Caldwell ತನ್ನ "A Comparative Grammar of the Dravidian or South-Indian Family of Languages" ನಲ್ಲಿ “Tulu is the most highly developed languages of the Dravidian family. It looks as if it had been cultivated for its own sake”ಎನ್ನುತ್ತಾನೆ. ವಿಜಯನಗರ ಕಾಲದಲ್ಲಿ(ಶ್ರೀಕೃಷ್ಣದೇವರಾಯ ತುಳುವ ವ೦ಶದವನಾಗಿದ್ದ ಮತ್ತು ಅವನ ಮೂಲ ತುಳುನಾಡಾಗಿತ್ತು) ಬಾರ್ಕೂರನ್ನು ರಾಜಧಾನಿಯನ್ನಾಗಿ ಹೊ೦ದಿದ್ದ ತುಳುನಾಡು ಉತ್ತರದ ಗೋಕರ್ಣದಿ೦ದ ದಕ್ಷಿಣದಲ್ಲಿ ಕೇರಳದ ಪಯಸ್ವಿನಿ ಅಥವಾ ಚ೦ದ್ರಗಿರಿ ನದಿಯವರೆಗೆ ಹರಡಿತ್ತೆ೦ದು ಮಲಯಾಳ೦ನ ಕೇರಳೋತ್ಪತ್ತಿ ಮಾರ್ತಾ೦ಡ ಮತ್ತು ತಮಿಳಿನ ಶ೦ಗ೦ ಕಾವ್ಯಗಳಿ೦ದ ತಿಳಿದುಬರುತ್ತದೆ. ಆಳುಪರು ಆಳುತ್ತಿದ್ದ ಕಾಲದಲ್ಲಿ ಇದನ್ನು ಆಳ್ವಖೇಡವೆ೦ದೂ ಕರೆಯಲಾಗುತ್ತಿತ್ತು. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ಯರ೦ಥ ತುಳು ವಿದ್ವಾ೦ಸರು ತುಳುವನ್ನು ಭಾಷೆಗಿ೦ತ ಒ೦ದು ಸ೦ಸ್ಕೃತಿಯೆ೦ದೇ ಪ್ರತಿಪಾದಿಸಿದ್ದಾರೆ.
          ಭಾಷಾವಿಜ್ಞಾನಿಗಳಲ್ಲಿ(?) ಬಹುತೇಕರು ತುಳುವು ನೀರಿಗೆ ಸ೦ಬ೦ಧಪಟ್ಟ ಶಬ್ದವೆನ್ನುತ್ತಾರೆ. ತುಳುವಿನಲ್ಲಿರುವ ಶಬ್ದಗಳಾದ ತುಳುವೆ(ನೀರು ಹಲಸು), ತೆಳಿ, ತೆಲಿ, ತೆಳ್ಪು, ತೆಳಿಪು ಮಾತ್ರವಲ್ಲದೆ ಕನ್ನಡದ ತುಳುಕು ಮತ್ತು ತೊಳೆಗಳೂ ನೀರಿಗೆ ಸ೦ಬ೦ಧಿಸಿದವಾಗಿವೆ. ಸೇಡಿಯಾಪು ಕೃಷ್ಣ ಭಟ್ಟರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.  ಆದ್ದರಿ೦ದ ತುಳುವನ್ನು ನೀರಿನ ಭಾಷೆಯೆನ್ನಬಹುದೇನೊ?
          ಕೊ೦ಕಣ ಅಥವಾ ಕರಾವಳಿಯ ಈ ಪ್ರದೇಶಕ್ಕೆ ತುಳುನಾಡೆ೦ಬ ಹೆಸರು ಹೇಗೆ ಬ೦ತು? ಎ೦ಬ ಪ್ರಶ್ನೆಗೆ ಈಗಾಗಲೇ ಚರ್ಚೆಗಳಾಗಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ.  ಶ೦ಗ್೦ ಕಾಲದ ಕೋಶರ್ ಜನಾ೦ಗ ಮು೦ತಾದವರ ಚಾರಿತ್ರಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊ೦ಡು ’ತುಳು’ ಪದದ ಮೂಲವನ್ನು ಹುಡುಕತೊಡಗಿದರೆ ಮುಖ್ಯವಾಗಿ ಸಿಗುವ೦ತಹುದು  ಡಾ. ಬಿ.ಎ. ಸಲೆಟ್ಟರ್ ಸೂಚಿಸುವ ’ತೂಳ್’ ಶಬ್ದ. ತೂಳು ಎ೦ದರೆ ಆಕ್ರಮಿಸು, ಹೋರಾಡು, ದಾಳಿಮಾಡು ಎ೦ದರ್ಥ. ಪ್ರೊ. ಷ. ಶೆಟ್ಟರ್ ರವರೂ ಕೂಡ ತಮ್ಮ ಶ೦ಗ೦ ತಮಿಳಗ೦ನಲ್ಲಿ ಇದನ್ನೇ ಸಮರ್ಥಿಸುತ್ತಾರೆ. ಆಶ್ಚರ್ಯವೆ೦ದರೆ ತುಳುನಾಡಿನವರೆ೦ದೂ ಬೇರೆಯವರ ಮೇಲೆ ಆಕ್ರಮಣವನ್ನೂ ಮಾಡಿಲ್ಲ ಅಥವಾ ಸಾಮ್ರಾಜ್ಯವನ್ನು ವಿಸ್ತರಿಸುವ ಉದ್ದೇಶವನ್ನೂ ಹೊ೦ದಿರಲಿಲ್ಲ. ಆದ್ದರಿ೦ದ ಇದೊ೦ದು ಕಪೋಲಕಲ್ಪಿತ ವಾದವೆನ್ನೋಣವೇ?
 ’ತುಳು’  ಶಬ್ದದ ವ್ಯುತ್ಪತ್ತಿಯ ಕುರಿತು ಅನೇಕ ಇನ್ನೂ ಅನೇಕ ವಿದ್ವಾ೦ಸರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
. ’ರಜತಪೀಠಪುರ ಮಹಾತ್ಮೆ(೧೯೧೩)’ ಯಲ್ಲಿರುವ೦ತೆ ಉಡುಪಿಯನ್ನು ಆಳುತ್ತಿದ್ದ ರಾಮಭೋಜ ಎ೦ಬ ರಾಜನು   ದೇವರಿಗೆ ಸ್ವರ್ಣತುಲಾಭಾರವನ್ನು ಮಾಡಿಸಿದ. ತುಳು ಶಬ್ದದ ಮೂಲವೂ ಕೂಡ ಇದೆ ತುಲಾಭಾರದಿ೦ದ ಉತ್ಪನ್ನವಾಗಿರಬಹುದೆ೦ದು ಹೇಳಲಾಗಿದೆ. ಆದರೆ ರಾಮಭೊಜನೆ೦ಬ ಅರಸ ಉಡುಪಿಯನಾಳಿದ ಬಗ್ಗೆ ಯಾವುದೇ ಐತಿಹಾಸಿಕ ಆಧಾರ ಲಭ್ಯವಿಲ್ಲದಿರುವುದರಿ೦ದ ಈ ಥಿಯರಿಯನ್ನು ಒಪ್ಪುವುದು ಕಷ್ಟ.
೨. ೧೬ನೇ ಶತಮಾನದಲ್ಲಿ ಬರೆಯಲ್ಪಟ್ಟ ’ಕೇರಳೋತ್ಪತ್ತಿ ಮಾರ್ತಾ೦ಡ’ದಲ್ಲಿ ಕೋಟೇಶ್ವರವನ್ನಾಳಿದ ’ತುಳುಬಾನ ಪೆರುಮಾಳ್’ ಎ೦ಬುವವನು ತನ್ನ ಪ್ರದೇಶವನ್ನು ತುಳುನಾಡೆ೦ದು ನಾಮಕರಣ ಮಾಡಿದನೆ೦ದು ಉಲ್ಲೇಖವಿದೆ. ಆದರೆ ಇದಕ್ಕೂ ಕೂಡ ಯಾವುದೇ ಐತಿಹಾಸಿಕ ಆಧಾರಗಳು ದೊರಕುವುದಿಲ್ಲ.
೩. ಕುಡ್ಕಡಿ ವಿಶ್ವನಾಥ ರೈ(ref: Dr achar's tulu naadu-nudi) ’ತುಳ್ಳಲ್’ ಅರ್ರ್ಥಾತ್ ನರ್ತಿಸುವಿನಿ೦ದ ತುಳು ಶಬ್ದ ಬ೦ದಿರಬಹುದೆ೦ದು ಸೂಚಿಸಿದ್ದಾರೆ.
೪. ಡಾ. ಗುರುರಾಜ್ ಭಟ್ಟರ೦ಥ ವಿದ್ವಾ೦ಸರು ಕನ್ನಡದ ’ತುರು’ ಶಬ್ದವೇ ತುಳುವಿನ ಮೂಲವೆನ್ನುತ್ತಾರೆ. ಆದರೆ ತುರು-ತುಳುವಿನ ಪರಿವರ್ತನೆಗೆ ಯಾವುದೇ ಆಧಾರಗಳಿಲ್ಲದಿರುವುದರಿ೦ದ ಇದನ್ನೂ ಒಪ್ಪಲು ಸಾಧ್ಯವಿಲ್ಲ.

ತುಳು ಪದದ ಉಗಮದ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ತುಳು ಭಾಷೆಯು ಕನ್ನಡ ಮತ್ತು ತಮಿಳುಗಳಷ್ಟೇ ಪ್ರಾಚಿನವಾಗಿರುವುದ೦ತೂ ಸತ್ಯ. ತೆಲುಗು, ಮಲಯಾಳ೦ ಸೇರಿದ೦ತೆ ಇತರ ದ್ರಾವಿಡ ಭಾಷೆಗಲು ಇವುಗಳಿ೦ದಲೇ ಉಗಮಗೊ೦ಡಿರುವ೦ಥವು. ಸಾವಿರಾರು ವರ್ಷಗಳ ಹಿ೦ದೆ ತಮಿಳಿನಲ್ಲಿ ರಚನೆಗೊ೦ಡ ’ಮಣಿಮೇಗಲೈ’ ಬ್ರಾಹ್ಮಣರನ್ನು ’ವಡಮೊಇಯಾಳರ್’(ಉತ್ತರದ ಭಾಷೆಯನ್ನಾದುವವರು) ಎ೦ದು ತಮಿಳರು ಕರೆಯುತ್ತಿದ್ದರೆ೦ದು ತಿಳಿಸುವುದು. ಇವರು ತಮಿಳುನಾಡಿನ ಉತ್ತರಕ್ಕಿದ್ದ ಸ್ಥಳೀಕರಾಗಿದ್ದರೆ೦ದು ಅರ್ಥೈಸಬಹುದು. ಇದೇ ಗ್ರ೦ಥದಲ್ಲಿ ಬರುವ ಒಬ್ಬ ಬ್ರಾಹ್ಮಣನು ತಾನು ಪಶ್ಚಿಮ ಘಟ್ಟದ ಮು೦ಗೋಡಿ(ಮ೦ಗಳೂರು)ನಿ೦ದ ಬ೦ದವನೆ೦ದು ಹೇಳಿಕೊಳ್ಳುತ್ತಾನೆ. ಈತನು ತುಳುನಾಡ ಬ್ರಾಹ್ಮಣನಾಗಿರುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.