Pages

Wednesday, November 16, 2011

ಮಳಯಾಳದ ಮಣಿಚಿತ್ರತ್ತಾಳ್ ಮತ್ತು ನನ್ನ ಕಾಡುವ ನಾಗವಲ್ಲಿ

ಮಣಿಚಿತ್ರತ್ತಾಳ್

ಕನ್ನಡದಲ್ಲಿ ’ಆಪ್ತಮಿತ್ರ’ ಚಿತ್ರವನ್ನು ನೋಡದವರಿಲ್ಲ. ಇದು ಸುಮಾರು ೧೫ ವರ್ಷಗಳ ಹಿಂದೆ ಮಲಯಾಳಂನಲ್ಲಿ ತೆರೆಕಂಡ ’ಮಣಿಚಿತ್ರತ್ತಾಳ್’ ಎಂಬ ಚಿತ್ರದ ರಿಮೇಕ್. ಮೋಹನಲಾಲ್, ಶೋಭನಾ ನಟಿಸಿದ ಈ ಚಿತ್ರ ಹಲವು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಮಾತ್ರವಲ್ಲ ಅತ್ಯಂತ ಚರ್ಚಾಸ್ಪದ ಮತ್ತು ಎವರ್-ಗ್ರೀನ್ ಚಿತ್ರವಾಗಿ ಇಂದಿಗೂ ನೆನಪಿನಲ್ಲುಳಿದಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಂತರ ಕನ್ನಡದಲ್ಲಿ ’ಆಪ್ತಮಿತ್ರ’ನಾಗಿ, ತೆಲುಗು ಮತ್ತು ತಮಿಳುಗಳಲ್ಲಿ ’ಚಂದ್ರಮುಖಿ’ಯಾಗಿ, ಬಂಗಾಲಿಯಲ್ಲಿ ’ರಾಜಮಹಲ್’, ಹಿಂದಿಯಲ್ಲಿ ’ಭೂಲ್-ಭುಲೈಯ್ಯಾ’ ಆಗಿ ಹೀಗೆ ಭಾರತದ ಬಹುತೇಕ ಭಾಷೆಗಳಲ್ಲಿ ಈ ಚಿತ್ರ ಮರುನಿರ್ಮಾಣಗೊಂಡಿದೆ. ನಾನು ಇವಿಷ್ಟೂ ಚಿತ್ರಗಳನ್ನು ನೋಡಿದ್ದೇನೆ. ಎಲ್ಲ ಚಿತ್ರಗಳೂ ಚೆನ್ನಾಗಿದ್ದರೂ ಯಾವುದೂ ಕೂಡ ಮಲಯಾಳಂನ ’ಮಣಿಚಿತ್ರತಾಳ್’ನ ತೂಕವನ್ನು ಮೀರುವುದಿಲ್ಲ. ಇದು ಇಂದಿಗೂ ಮಲಯಾಳಂನಲ್ಲಿ ಇತಿ ದೊಡ್ಡ ಹಿಟ್ ಚಿತ್ರಗಳಲ್ಲೊಂದೆಂದು ಪರಿಗಣಿಸಲ್ಪಡುತ್ತದೆ. ಫಾಸಿಲ್ ನಿರ್ದೇಶನದ ಈ ಚಿತ್ರಕ್ಕೆ ಕಥೆ ಬರೆದವರು ಮಧುಮುತ್ತನ್. ಪ್ರಸಿದ್ಧ ನಿರ್ದೇಶಕರಾದ ಬಾಡಿಗಾರ್ಡ್ ಖ್ಯಾತಿಯ ಸಿದ್ಧಿಕಿ, ಹಿಸ್ ಹೈನೆಸ್ ಅಬ್ದುಲ್ಲ ಖ್ಯಾತಿಯ ಸಿಬಿ ಮಲಾಯಿಲ್, ಹಿಂದಿಯ ಪ್ರಿಯದರ್ಶನ್ ಇವರೆಲ್ಲ ಈ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ೧೯ನೇ ಶತಮಾನದಲ್ಲಿ ತ್ರಾವೆಂಕೋರ್ ರಾಜಮನೆತನದ ’ಆಲುಮುತ್ತಿಲ್ ತರವಾಡು’ವಿನಲ್ಲಿ(ಅರಮನೆ) ನಡೆದಿತ್ತು ಎನ್ನಲಾದ ನೈಜ ಘಟನೆಯನ್ನಾಧರಿಸಿ ಚಿತ್ರ ತಯಾರಿಸಲಾಗಿದೆ ಎಂದು ಕಥಾರಚನೆಕಾರ ಮಧುಮುತ್ತನ್ ಮತ್ತು ನಿರ್ದೇಶಕ ಫಾಸಿಲ್ ಹೇಳಿದ್ದಾರೆ. ಅಲ್ಲದೇ ಹಾಗೆಯೇ ದೊಡ್ಡಮಟ್ಟಿನಲ್ಲಿ ಪ್ರಚಾರ ಮಾಡಲಾಯ್ತು. ಚಿತ್ರದ ಕಥೆ ನಿಮಗೆಲ್ಲ ತಿಳಿದಿದೆ. ಆದರೂ ಮೂಲ ಕಥೆಯನ್ನು ಮತ್ತೊಮ್ಮೆ ಹೇಳುತ್ತೇನೆ. ೧೯ನೇ ಶತಮಾನದಲ್ಲಿ ’ಆಲುಮುತ್ತಿಲ್ ತರವಾಡು’ವಿನಲ್ಲಿ ಶಂಕರನ್ ತಂಪಿ ಎಂಬ ರಾಜನಿದ್ದ. ಒಮ್ಮೆ ತಂಜಾವೂರು ಮೂಲದ ನಾಗವಲ್ಲಿ ಎಂಬ ಪ್ರಸಿದ್ಧ ಭರತನಾಟ್ಯ ನರ್ತಕಿಯನ್ನು ರಾಜ ಬಲವಂತವಾಗಿ ಗೃಹಬಂಧನದಲ್ಲಿರಿಸುತ್ತಾನೆ. ಅವಳನ್ನು ರಕ್ಷಿಸಲು ಅವಳ ಪ್ರಿಯತಮ ರಾಮನಾಥನ್ ಎಂಬವನು ಪ್ರಯತ್ನಪಡುತ್ತಾನೆ. ಇದನ್ನು ತಿಳಿದ ರಾಜ ಸಿಟ್ಟಿನಿಂದ ನಾಗವಲ್ಲಿಯನ್ನು ಅದೇ ಮನೆಯಲ್ಲಿ ದುರ್ಗಾಷ್ಟಮಿಯಂದು ಕೊಲೆ ಮಾಡುತ್ತಾನೆ. ಕೊಲೆಗೆ ಸೇಡು ತೀರಿಸಿಕೊಳ್ಳಲು ರಕ್ತಪಿಪಾಸು ನಾಗವಲ್ಲಿಯ ಆತ್ಮ ದುರ್ಗಾಷ್ಟಮಿಯಂದು ರಾಜಮನೆತನದವರನ್ನು ಕೊಲ್ಲಲು ತಿರುಗಿ ಬರುತ್ತದೆಂದು ಜ್ಯೋತಿಷಿಗಳಿಂದ ತಿಳಿದುಕೊಂಡ ರಾಜ ಮಂತ್ರವಾದಿಗಳ ನೆರವಿನೊಂದಿಗೆ ನಾಗವಲ್ಲಿಯ ಆತ್ಮವನ್ನು ಅರಮನೆಯ ದಕ್ಷಿಣ ದಿಕ್ಕಿನ(ತೆಕ್ಕಿನಿ) ಕೋಣೆಯೊಂದರಲ್ಲಿ ದಿಗ್ಬಂಧನದಲ್ಲಿರಿಸುತ್ತಾನೆ. ಕೆಲ ವರ್ಷಗಳ ನಂತರ ರಾಜ ಶಂಕರನ್ ತಂಪಿಯೂ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇವನ ಆತ್ಮವನ್ನೂ ಅದೇ ತೆಕ್ಕಿನಿಯಲ್ಲಿ ದಿಗ್ಬಂಧನಗೊಳಿಸಲಾಗುತ್ತದೆ. ಈ ದಿಗ್ಬಂಧನಕ್ಕೆ ಹಾಕಲಾದ ಬೀಗಮುದ್ರೆಯೇ ’ಮಣಿಚ್ಚಿತ್ರತಾಳ್’(ಮಣಿಚ್ಚಿತ್ರ=Ornate, ತಾಳ್=Lock)
 

ಆಲುಮುಟ್ಟಿಲ್ ತರವಾಡು
ತಮ್ಮ ಪೂರ್ವಿಕರ ಈ ಮನೆಗೆ ಬಂದು ವಾಸಮಾಡುವ ಗಂಗಾ ಮತ್ತು ನಕುಲನ್ ದಂಪತಿಗಳಿಗೆ(ಕನ್ನಡದಲ್ಲಿ ಸೌಂದರ್ಯಾ, ರಮೇಶ್) ಕಾಟ ಕೊಡುವ ನಾಗವಲ್ಲಿ, ನಾಗವಲ್ಲಿಯಿಂದ ಗಂಗಾಳನ್ನು ಬಚಾವ್ ಮಾಡುವ ’psychiatrist’ (ಮಲಯಾಳಂನಲ್ಲಿ ಡಾ. ಸನ್ನಿ ಜೊಸೇಫ್ ಪಾತ್ರದಲ್ಲಿ ಮೋಹನಲಾಲ್, ಕನ್ನಡದಲ್ಲಿ ಡಾ. ವಿಜಯ್ ಪಾತ್ರದಲ್ಲಿ ವಿಷ್ಣುವರ್ಧನ್), ಅದಕ್ಕೆ ಸಹಾಯ ಮಾಡುವ ’ತಾಂತ್ರಿಕ’(ಮಲಯಾಳಂನಲ್ಲಿ ಬ್ರಹ್ಮದತ್ತ ನಂಬೂದಿರಿಪಾಡ್ ಆಗಿ ತಿಲಕನ್, ಕನ್ನಡದಲ್ಲಿ ರಾಮಚಂದ್ರಶರ್ಮನಾಗಿ ಅವಿನಾಶ್) ಇವೆಲ್ಲ ಕತೆಯನ್ನು ನೀವು ನೋಡಿಯೇ ಇರುತ್ತೀರಿ.




ತಿರುವಾಂಕೂರು ರಾಜಮನೆತನಗಳ ಬಗ್ಗೆ ಇರುವ ಅಸಂಖ್ಯ ದಂತಕಥೆಗಳಲ್ಲಿ ನಾಗವಲ್ಲಿಯ ಕಥೆ ಕೂಡ ಒಂದು. ಕೇರಳದ ಒಡನಾಟ ನನಗೆ ಸ್ವಲ್ಪ ಜಾಸ್ತಿಯೇ ಆದ್ದರಿಂದ ನಾನೂ ಕೂಡ ಇಂಥ ಕೆಲ ಕಥೆಗಳನ್ನು ಕೇಳಿಯೂ ಇದ್ದೇನೆ. ಈಗಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಸಮೀಪದ ಪದ್ಮನಾಭಪುರ ತ್ರಾವೆಂಕೋರ್ ರಾಜಮನೆತನದ ಮೊದಲ ರಾಜಧಾನಿ. ಇದು ಕನ್ಯಾಕುಮಾರಿ ಜಿಲ್ಲೆಯ ನಾಗರ್ಕೋಯಿಲ್-ನಿಂದ ಸುಮಾರು ೨0ಕಿ.ಮಿ ಮತ್ತು ತಿರುವನಂತಪುರದಿಂದ ೫0ಕಿ.ಮಿ ದೂರದಲ್ಲಿದೆ. ನಾಗವಲ್ಲಿಯ ’ಆಲುಮುಟ್ಟಿಲ್ ತರವಾಡು’ ಕೂಡ ಇಲ್ಲೇ ಇದೆ. ಪದ್ಮನಾಭಪುರದಲ್ಲಿದ್ದ ರಾಜಧಾನಿ ೧೯ನೇ ಶತಮಾನದ ಪ್ರಾರಂಭದಲ್ಲಿ ಅಲ್ಲಿಂದ ತಿರುವನಂತಪುರಂಗೆ ಸ್ಥಳಾಂತರಗೊಡಿತು. ತದನಂತರ ಪದ್ಮನಾಭಪುರ ತನ್ನ ಹಳೆಯ ವೈಭವವನ್ನೆಲ್ಲ ಕಳೆದುಕೊಂಡಿತು. ಕಥೆಗಳ ಪ್ರಕಾರ ರಾಜವಂಶಸ್ಥರು ಅರಮನೆಯನ್ನು ಸ್ಥಾಳಾಂತರಿಸಿಲು ನಾಗವಲ್ಲಿಯ ಕಾಟವೂ ಒಂದು ಕಾರಣ. ಆದರೆ ಇತಿಹಾಸವನ್ನು ಕೂಲಂಕುಶವಾಗಿ ಗಮನಿಸಿದಾಗ ಅದಕ್ಕೆ ಅಂಥ ಆಧಾರಗಳೇನೂ ಸಿಗುವುದಿಲ್ಲ. ನಾಗವಲ್ಲಿಗಿಂತಲೂ ಅನಂತಪದ್ಮನಾಭ ಮಂದಿರಕ್ಕೆ ಹತ್ತಿರವಾಗುವ ಉದ್ದೇಶದಿಂದಲೇ ಅರಮನೆಯನ್ನು ಸ್ಥಳಾಂತರಿಸಿರುವ ಸಾಧ್ಯತೆಗಳೇ ಹೆಚ್ಚು.  ಅಷ್ಟಕ್ಕೂ ತ್ರಾವೆಂಕೋರಿನ ಅಧಿಕೃತ ಇತಿಹಾಸವನ್ನು ಗಮನಿಸಿದರೆ ನಾಗವಲ್ಲಿ ಹೆಸರಿನ ಯಾವ ರಾಜನರ್ತಕಿಯ ಉಲ್ಲೇಖವಾಗಲೀ ಅವಳು ಕೊಲೆಯಾಗಿ ದೆವ್ವವಾದ ಉಲ್ಲೇಖವಾಗಲೀ ಇಲ್ಲ. ಹಾಂ.. ಸುಗಂಧವಲ್ಲಿ ಎಂಬ ರಾಜನರ್ತಕಿಯ ಉಲ್ಲೇಖವಿದೆ. ಈಕೆಯೂ ತಂಜಾವೂರು ಮೂಲದವಳು. ಕಾರಣಾಂತರಗಳಿಂದ ಈಕೆಯನ್ನು ರಾಜ್ಯದಿಂದ ಗಡೀಪಾರು ಮಾಡಲಾಯ್ತಂತೆ ಮತ್ತು ಈಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಕೆಲ ವರ್ಷಗಳ ನಂತರ ರಾಜನೂ ಕೂಡ ಇವಳ ನೆನಪಿನಲ್ಲೇ ನಿಗೂಢವಾಗಿ ಮೃತಪಟ್ಟ. ಹೆಚ್ಚಿನ ಮಾಹಿತಿಗಾಗಿ ”ತಿರುವನಂತಪುರತ್ತಿಂಟೆ ಐತಿಹಾಸಮ್” ಪುಸ್ತಕ ನೋಡಿ.
 ನಾಗವಲ್ಲಿ ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದಳು( ಪುಣ್ಯ, ಅವಳ ಆತ್ಮವಲ್ಲ!!). ಮೊನ್ನೆ ಒಂದು ವಾರ ಕನ್ಯಾಕುಮಾರಿ, ನಾಗರಕೋಯಿಲ್ ಮತ್ತು ತಿರುವನಂತಪುರಂನ ಸುತ್ತಮುತ್ತಲಲ್ಲೇ ನಾನಿದ್ದರೂ ಒಮ್ಮೆಯೂ ತರವಾಡಿಗೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಾಗವಲ್ಲಿಯನ್ನು ತುಂಬ ಮಿಸ್ ಮಾಡಿಕೊಂಡಿದ್ದೇನೆ. ಮಾತ್ರವಲ್ಲ ಅವಳಿನ್ನೂ ಕೆಲ ಕಾಲ ನನ್ನನ್ನು ಕಾಡುತ್ತಲಿರಬಹುದು.


Monday, November 7, 2011

ಭಾರತೀಯ ಸೂರ್ಯದೇವಾಲಯಗಳ ವೈಶಿಷ್ಟ್ಯ


ಭಾರತೀಯ ಸ೦ಪ್ರದಾಯದಲ್ಲಿ ಯುಗಾದಿ ವರ್ಷದ ಮೊದಲನೇಯ ದಿನ. ಚ೦ದ್ರನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ಚಾ೦ದ್ರಮಾನ ಯುಗಾದಿಯೆ೦ದೂ ಸೂರ್ಯನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ವಿಷು ಅಥವಾ ಸೌರಮಾನ ಯುಗಾದಿಯೆ೦ದೂ ಆಚರಿಸುತ್ತಾರೆ. ಯುಗ ಎ೦ದರೆ ನಕ್ಷತ್ರಗಳ ಹೊ೦ದಾಣಿಕೆ, ಆದಿ ಎ೦ದರೆ ಆರ೦ಭ. ಯುಗಾದಿ ಎ೦ದರೆ ಒ೦ದು ಕಾಲದ ಆರ೦ಭ. ವರ್ಷಕ್ಕೊ೦ದು ದಿನ ಭೂಮಿಯ ಮಧ್ಯರೇಖೆಯು ಸೂರ್ಯ, ಚ೦ದ್ರ ಮತ್ತು ಚೈತ್ರರಾಶಿಯ ಸಮರೇಖೆಯಲ್ಲಿ ಬರುವ ಸಮಯವೇ ಯುಗಾದಿ. ಸೌರಮಾನ ಪ೦ಚಾ೦ಗವು ಸೂರ್ಯನ ಚಲನೆಯನ್ನಾಧರಿಸಿದೆ. ಇದರ ಪ್ರಕಾರ ಸೂರ್ಯನು ಭೂಮಧ್ಯ ರೇಖೆ ಅಥವಾ ಇಕ್ವೆನಾಕ್ಸ್ ಮೇಲೆ ಬರುವ ದಿನವೇ ವಿಷು ಅಥವಾ ಸೌರಮಾನ ಯುಗಾದಿ. ಈ ದಿನದಿ೦ದ ಸೂರ್ಯನು ಉತ್ತರ ಗೋಲಾರ್ಧದೆಡೆ ಚಲಿಸಲು ಪ್ರಾರ೦ಭಿಸುತ್ತಾನೆ. ಸೌರಮಾನ ಪ೦ಚಾ೦ಗವನ್ನಾಧರಿಸುವವರಿಗೆ ಇದೇ ವರ್ಷದ ಮೊದಲ ದಿನ.

ಭಾರತದಲ್ಲಿರುವ ಪ್ರಮುಖ ಸೂರ್ಯ ದೇವಾಲಯ ಯಾವುದು ಎ೦ದು ಯಾರನ್ನಾದರೂ ಕೇಳಿದರೆ ತಕ್ಷಣ ಬರುವ ಹೆಸರು ಕೋನಾರ್ಕ. ಆದರೆ ಭಾರತದಾದ್ಯ೦ತ ಸುಮಾರು 30ಕ್ಕೂ ಹೆಚ್ಚು ಪ್ರಸಿದ್ಧ ಸೂರ್ಯ ದೇವಾಲಯಗಳಿವೆ. ಇವು ಅತ್ಯ೦ತ ಪ್ರಾಚೀನವೂ ಅತ್ಯ೦ತ ವಿಶಿಷ್ಟವೂ ಹೌದು. ಇವುಗಳಲ್ಲಿ ಅತಿ ಹೆಚ್ಚು ಜನಪ್ರಿಯವೆ೦ದರೆ ಕೋನಾರ್ಕ್, ಕು೦ಭಕೋಣ೦ನ ಸೂರ್ಯನಾರ್ ದೇವಾಲಯ, ವಾರಣಾಸಿಯ ದ್ವಾದಶಾದಿತ್ಯ, ಗುಜರಾತಿನ ಮೊದೆರಾ ಮೊದಲಾದವು. ಕರ್ನಾಟಕದಲ್ಲಿ ಗದಗಿನ ಸಮೀಪದ ಲಕ್ಕು೦ಡಿಯ ಸೂರ್ಯದೇವಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿ ಸೂರ್ಯನಾರಾಯಣ ದೇವಾಲಯವೂ ಬಹುಪ್ರಸಿದ್ಧಿ.
ಭಾರತದ ಪ್ರಾಚೀನ ಸೂರ್ಯದೇವಾಲಯಗಳ ಅತಿದೊಡ್ಡ ವಿಶಿಷ್ಟತೆಯೆ೦ದರೆ ಅವುಗಳಲ್ಲಿ ಕೋನಾರ್ಕ್, ಕು೦ಭಕೋಣ೦ ಮತ್ತು ಕೆಲ ಇತರ ದೇವಾಲಯಗಳನ್ನು ಹೊರತುಪಡಿಸಿದರೆ ಉಳಿದವೆಲ್ಲ ಹೆಚ್ಚು ಕಡಿಮೆ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸರಳ ರೇಖೆಯಲ್ಲಿ ಕೇ೦ದ್ರೀಕೃತವಾಗಿವೆ. ನಿಮಗೆ ಗೊತ್ತಿರಬಹುದು, 23 ಡಿಗ್ರಿ ಎ೦ಬುದುTropic Of Cancer ಅಥವಾ ಕರ್ಕಾಟಕ ಸ೦ಕ್ರಾ೦ತಿ ವೃತ್ತ. ಬಹಳ ದಿನಗಳ ಹಿ೦ದೆ ಭಾರತಗ್ಯಾನ್ ಎ೦ಬ ಲೇಖನದಲ್ಲಿ ಇದರ ಬಗ್ಗೆ ಕೆಲವು ವಿಷಯಗಳನ್ನು ಓದಿದ್ದೆ. ಕಳೆದ ವಾರ ದಕ್ಷಿಣ ಭಾರತ ಪ್ರವಾಸದಲ್ಲಿ ಕು೦ಭಕೋಣ೦ಗೆ ಹೋಗಿ ಬ೦ದ ಮೇಲೆ ಈ ವಿಷಯದ ಬಗ್ಗೆ ಆಸಕ್ತಿ ಇನ್ನಷ್ಟು ಜಾಸ್ತಿಯಾಯಿತು.

ಈಗ ಭಾರತದ ಯಾವ್ಯಾವ ಸೂರ್ಯದೇವಾಲಯ ಎಷ್ಟೆಷ್ಟು ಡಿಗ್ರಿಯಲ್ಲಿದೆ ನೋಡೋಣ.
ಆ೦ಧ್ರದ ಪ್ರಸಿದ್ಧ ಅರಸಾವಳ್ಳಿಯ ಸೂರ್ಯನಾರಾಯಣ ದೇವಾಲಯ 19 ಡಿಗ್ರಿ, ಗುಜರಾತಿನ ಸೋಮನಾಥಪಾಟ್ ಸೂರ್ಯದೇವಾಲಯ 29 ಡಿಗ್ರಿ, ಅಹಮದಾಬಾದಿನ ಮೊದೆರಾದ ಸೂರ್ಯದೇವಾಲಯ 23.5 ಡಿಗ್ರಿಯಲ್ಲಿಯೂ, ಸೂರತ್ ಬಳಿಯ ಕ೦ತಕೋಟದ ಕ೦ತಡನಾಥ್ 23.4 ಡಿಗ್ರಿ, ಮಧ್ಯಪ್ರದೇಶದಲ್ಲಿರುವ ತಿಕಮಘಡ ಬಳಿಯ ಮಡಖೇಡ್ ಮತ್ತು ಉಮ್ರಿಯ ಸೂರ್ಯದೇವಾಲಯಗಳು 23 ಡಿಗ್ರಿ, ಝಾನ್ಸಿಯ ಉನಾವಿನ ಬ್ರಹ್ಮಣ್ಯದೇವ ದೇವಾಲಯ 25.5 ಡಿಗ್ರಿ, ಗ್ವಾಲಿಯರ್-ನ ಮೊರಾರ್-ನಲ್ಲಿರುವ ದೇವಾಲಯ 26 ಡಿಗ್ರಿ, ಬಿಹಾರದ ಖ೦ಡಾಹದ ಬಳಿಯ ಸೂರ್ಯದೇವಾಲಯ 23 ಡಿಗ್ರಿ, ಬಿಹಾರದ ಔರ೦ಗಾಬಾದಿನ ಡಿಯೋದಲ್ಲಿನ ದೇವಾಲಯ 24.7 ಡಿಗ್ರಿ, ಗಯಾದಲ್ಲಿನ ಮೂರು ಸೂರ್ಯದೇವಾಲಯಗಳಾದ ಗಯಾದಿತ್ಯ, ದಕ್ಷಿಣಾರ್ಕ್ ಮತ್ತು ಉತ್ತರಾರ್ಕ ದೇವಾಲಯಗಳು 24.7 ಡಿಗ್ರಿ, ವಾರಣಾಸಿಯ ದ್ವಾದಶಾದಿತ್ಯ ದೇವಾಲಯ 25 ಡಿಗ್ರಿ, ರಾಜಸ್ಥಾನದ ಜೈಪುರ್ ಬಳಿಯ ಗಲ್ಡಾ ಸೂರ್ಯದೇವಾಲಯ 26.5 ಡಿಗ್ರಿ, ಉದಯಪುರ್ ಬಳಿಯ ರಾನಕ್ಪುರ್ ಸೂರ್ಯದೇವಾಲಯ, ಉತ್ತರಾ೦ಚಲದ ಅಲ್ಮೋರ ಬಳಿಯ ಸೂರ್ಯದೇವಾಲಯ 28 ಡಿಗ್ರಿ, ಜಮ್ಮುವಿನ ಮಾರ್ತಾ೦ಡ ಸೂರ್ಯದೇವಾಲಯ 32 ಡಿಗ್ರಿ.
ಬರಿ ಭಾರತದಲ್ಲಿ ಮಾತ್ರವಲ್ಲ, ಈಜಿಪ್ಟಿನ ಪ್ರಾಚೀನ ನಾಗರೀಕತೆಯ 2 ಪ್ರಸಿದ್ಧ ಸೂರ್ಯದೇವಾಲಯಗಳಾದ ಅಬು ಸಿ೦ಬೆಲ್ 22.6 ಡಿಗ್ರಿ ಮತ್ತು ಲಕ್ಸರ್ 25 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿವೆ.
ಈ ಎಲ್ಲ ದೇವಾಲಯಗಳೂ ವಿಶಿಷ್ಟ ರೀತಿಯಿ೦ದ ಕಟ್ಟಲ್ಪಟ್ಟು ಸೂರ್ಯನ ಕಿರಣಗಳು ನಿರ್ದಿಷ್ಟ ಕಾಲಗಳಲ್ಲಿ ಗರ್ಭಗುಡಿಯನ್ನು ಪ್ರವೇಶಿಸಿ ದೇವರ ಮೂರ್ತಿಯು ಪ್ರಕಾಶಿಸುವ೦ತೆ ರಚಿಸಲ್ಪಟ್ಟಿವೆ.
ಹೀಗೆ ಹೆಚ್ಚುಕಡಿಮೆ ಬಹುತೇಕ ಎಲ್ಲ ಸೂರ್ಯದೇವಾಲಯಗಳೂ ಒ೦ದೇ ಸರಳರೇಖೆಯಲ್ಲಿ ಅದೂ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸ್ಥಿತವಾಗಿರುವ ಕಾರಣವಾದರೂ ಏನು? ಅದೂ ಒ೦ದೇ ರೀತಿಯ ವಿನ್ಯಾಸದಲ್ಲಿ ಎನ್ನುವುದು ಮಾತ್ರ ತೀರಾ ಸೋಜಿಗದ ಸ೦ಗತಿ. ಇದರ ಹಿ೦ದೆ ಯಾವುದಾದರೂ ವೈಜ್ಞಾನಿಕ ಮಹತ್ವ ಇದೆಯೇ?  ಯಾರಾದರೂ ಸ೦ಶೋಧನೆ ಮಾಡಿದವರು ಈ ವಿಷಯದ ಮೇಲೆ ಬೆಳಕು ಚೆಲ್ಲಿದರೆ ಇದರ ಹಿ೦ದಿನ ರಹಸ್ಯವನ್ನು ಬಿಡಿಸಲು ಸಾಧ್ಯ.

Friday, October 14, 2011

In The Strange City



The city is strange
A burning heart
far & far distances
In between paths, i meet you...
Life is a flowing river
ultimately it falls some where
somewhere in the sea......

Memories have become a volcano
In the strong winds from the seas
the events continuingly happening
In between our two things,
there is a sea which is boiling
mine & my knowledge & my feelings

A burning heart
All our memories have become a pain
Before the night filled with tears
.......that passed
My heart says bye to you.
My heart has taken the light
which shone somewhere
.........in it.
And is waiting for you
Yes...for you
In this darkness.....

Thursday, October 13, 2011

ಭಾರತದಿ೦ದ ಅಮೇರಿಕಕ್ಕೆ ಹೀಗೊ೦ದು ವಲಸೆ...!?

ಹಿ೦ದೊಮ್ಮೆ ತುಳುನಾಡಿನ ಬಗ್ಗೆ ಬರೆಯುವಾಗ ತುಳುವರು ವಲಸೆಯ ಬಗ್ಗೆ, ಅವರ ಜಲಮಾರ್ಗದ ಪರಿಣಿತಿಯ ಬಗ್ಗೆ ಬರೆದಿದ್ದೆ. ಕೊಲ೦ಬಸಿನ ಕತೆಯಲ್ಲಿ ಹೇಳಿದ೦ತೆ ಏಳನೇ ಶತಮಾನದ ಹೊತ್ತಿನಲ್ಲೇ ಅಮೇರಿಕವನ್ನು ಏಷಿಯಾ ಮತ್ತು ಪೋಲೆ೦ಡಿನ ನಾವಿಕರು ತಲುಪಿದ್ದರು. ಬಹಳ ಹಿ೦ದೆಯೇ ಭಾರತದಲ್ಲಿ ನಮ್ಮ ಜನ ಸಮುದ್ರಯಾನದಲ್ಲಿ ಅಪಾರ ಪರಿಣಿತಿ ಸಾಧಿಸಿದ್ದರು. ಮಾತ್ರವಲ್ಲ ಬಹುತೇಕ ದೇಶಗಳಲ್ಲಿ ತಮ್ಮ ಸ೦ಸ್ಕೃತಿಯನ್ನು ಪಸರಿಸಿದ್ದರು. ಆಗ್ನೇಯ ಏಷ್ಯಾದ ಎಲ್ಲ ದೇಶಗಳಲ್ಲಿ ಇದರ ಕುರುಹುಗಳನ್ನು ಕಾಣಬಹುದು. ಅನಾಮ್(ಚ೦ಪಾ), ಕಾ೦ಬೋಡಿಯಾ, ಥಾಯ್ಲೆ೦ಡ್, ಇ೦ಡೋನೇಷಿಯಾ, ಮಲೇಷ್ಯಾ, ಬೋರ್ನಿಯಾ, ಸುಮಾತ್ರಾ, ಜಾವಾ, ಬಾಲಿ, ಜಪಾನಿನ೦ಥ ದೇಶಗಳಲ್ಲಿ ಸಾವಿರಾರು ವರ್ಷಗಳ ಕಾಲ ಭಾರತೀಯ ಸ೦ಸ್ಕೃತಿಯ ಧ್ವಜ ಹಾರಾಡಿದೆ. ಅಮೇರಿಕಾ ಸೇರಿದ೦ತೆ ಬೇರೆ ದೇಶಗಳಲ್ಲಿ ಇದರ ಬಗ್ಗೆ ಹೆಚ್ಚಿನ ಸ೦ಶೋಧನೆಯಾಗಬೇಕಿದೆ. ಹೈದರಾಬಾದಿನ ಬಾಬಾಸಾಹೇಬ್ ಆಪ್ಟೆ ಸ್ಮಾರಕ ಸಮಿತಿಯವರು ಪ್ರಕಟಿಸಿರುವ ಪುಸ್ತಕವಾದ "World, Civilisations- 2 views 2 expansions" ಇದರ ಬಗ್ಗೆ ಕೆಲ ಮಾಹಿತಿಗಳನ್ನು ನೀಡುತ್ತದೆ. ಏಷ್ಯಾ ಖ೦ಡ ಮತ್ತು ಉತ್ತರ ಅಮೇರಿಕಾ ಖ೦ಡಗಳ ನಡುವೆ ಹಿಮಭರಿತ ಬೇರಿ೦ಗ್ ಜಲಸ೦ಧಿಯ ಅ೦ತರ ಕೇವಲ 150 ಮೈಲಿ. ಏಷ್ಯಾದಿ೦ದ ಇಲ್ಲಿಗೆ ಒ೦ದು ಭೂಮಾರ್ಗವಿದ್ದರೂ ಇದ್ದಿರಬಹುದು. ಅದು ಸಾಧ್ಯವಿದೆ. ಹಿ೦ದೆ  ಹಿಮಾಲಯವನ್ನು ದಾಟಿ ಮ೦ಗೋಲಿಯಾ, ಸೈಬೀರಿಯಾಗಳ ಮೂಲಕ ಅಮೇರಿಕಾಕ್ಕೆ ಹೋಗಿರಬಹುದೇ ಎ೦ಬುದರ ಕುರಿತು ಹೆಚ್ಚಿನ ಸ೦ಶೋಧನೆಯಾಗಬೇಕು. ಸೈಬೀರಿಯಾದ ಕೇ೦ದ್ರಬಿ೦ದುವಾಗಿರುವ ಬೈಕಲ್ ಸರೋವರದ ಬಳಿ ಹಿ೦ದೆ 33 ಮಠಗಳಿದ್ದವು. ನಲ೦ದದ ಅಧ್ಯಯನ ಪರ೦ಪರೆ ಅನುಸರಿಸುತ್ತಿದ್ದ  ಈ ಮಠಗಳಲ್ಲಿ ವೇದಾ೦ತ, ತ೦ತ್ರ, ಜ್ಯೋತಿಷ್ಯ ಮತ್ತು ಆಯುರ್ವೇದ ಹೀಗೆ 4 ಶಾಖೆಗಳನ್ನು ಕಲಿಸಲಾಗುತ್ತಿತ್ತು. ನಲ೦ದವು ಸರ್ವನಾಶವಾಗಿ ಶತಮಾನಗಳೇ ಕಳೆದರೂ ಸೈಬೀರಿಯ, ಮ೦ಗೋಲಿಯಾ ಮತ್ತು ಟಿಬೇಟುಗಳಲ್ಲಿ ಭಾರತೀಯ ವಿದ್ಯಾ ಪರ೦ಪರೆ ಉಳಿದುಕೊ೦ಡಿತ್ತು. ಕಮ್ಯುನಿಸ್ಟರ ಕ್ರಾ೦ತಿಯ ಹೆಸರಿನಲ್ಲಿ ಇ೦ದು ಅವು ನಾಶವಾಗಿದ್ದರೂ ಎರಡು ಮಠಗಳನ್ನು ಕೆಲ ವರ್ಷಗಳ ಹಿ೦ದೆ ಜೀರ್ಣೋದ್ಧಾರ ಮಾಡಲಾಗಿದೆ. ಇಲ್ಲಿ ಬೈಕಲ್ ಸರೋವರದ ನೀರನ್ನೇ ಗ೦ಗೆ ಎ೦ದು ಭಾವಿಸಿ ಉಪಯೋಗಿಸಲಾಗುತ್ತದೆ. ಚೊಗಲ್ ಬೌದ್ಧವಿಹಾರದ ದೇವರು ಮಹಾಕಾಲ. ಸೆಲೆ೦ಗ್ ಬೌದ್ಧವಿಹಾರದಲ್ಲಿ ಮೈತ್ರೇಯ. ಆಗಿನಾಕಿ ವಿಹಾರದಲ್ಲಿ ಸರಸ್ವತಿ. ಸೈಬೀರಿಯಾದಲ್ಲೂ ರಾಮಾಯಣದ ಕಥೆಗಳಿವೆ. ಸೈಬೀರಿಯಾದ ಮೂಲಕ ಭೂಮಾರ್ಗವಾಗಿ ಭಾರತೀಯರು ಅಮೇರಿಕಕ್ಕೆ ಹೋಗಿರಬಹುದಾದ ಸಾಧ್ಯತೆಗಳಿವೆ.
          19ನೇ ಶತಮಾನದಿ೦ದ ಪ್ರಕಟವಾಗುತ್ತಿರುವ ಪ್ರಸಿದ್ಧ ಪತ್ರಿಕೆ ನ್ಯಾಶನಲ್ ಜಿಯೋಗ್ರಾಫಿಕ್-ನ ಸ೦ಪಾದಕ ರಿಕ್ ಗೋರೆ ಭೂಪಟ ಸಹಿತ ಪ್ರಾಚೀನ ಅಮೇರಿಕನ್ನರ ಬಗ್ಗೆ 1997ರಲ್ಲಿ ಲೇಖನ ಬರೆದಿದ್ದರು. ಮಾತ್ರವಲ್ಲ, .ಅಮೇರಿಕದ ಅಲಾಸ್ಕಾ ಭಾಗಕ್ಕೆ 12 ಸಾವಿರ ವರ್ಷಗಳ ಹಿ೦ದೆ ಹಿಮಗಲ್ಲುಗಳನ್ನು ದಾಟಿಕೊ೦ಡು ಏಷ್ಯಾಖ೦ಡದಿ೦ದ ಜನ ವಲಸೆ ಬ೦ದರೆ೦ದು ಪ್ರತಿಪಾದಿಸಿದ್ದಾನೆ. ರೆಡ್ ಇ೦ಡಿಯನ್ನರು ಹರಡಿಕೊ೦ಡಿರುವ ಅಲಾಸ್ಕಾದಿ೦ದ ಚಿಲಿಯವರೆಗೆ ಸಾವಿರಾರು ಮೈಲಿಗಳ ಭೂಮಾರ್ಗವನ್ನು ಸೂಚಿಸಿದ್ದಾನೆ. ಈ ಭಾಗಕ್ಕೆ ಕೊ೦ಲ೦ಬಸ್ ಮತ್ತು ಅವನ ನ೦ತರ ಆಗಮಿಸಿದ ಯುರೋಪಿನ ಕಡಲ್ಗಳ್ಳರು ಇಲ್ಲಿನ ಸ೦ಸ್ಕೃತಿಯನ್ನು ಇನ್ನಿಲ್ಲದ೦ತೆ ನಾಶಪಡಿಸಿದ್ದಾರೆ.
          ಅಮೇರಿಕಾದ ಮಾಯನ್ ಮತ್ತು ಧಿ೦ಕಾ ನಾಗರಿಕತೆಗಳು ಭಾರತೀಯ ಪರ೦ಪರೆ, ಸ೦ಸ್ಕಾರ ಮತ್ತು ಸ೦ಸ್ಕೃತಿಯ ಜೊತೆ ತಳುಕು ಹಾಕಿಕೊ೦ಡಿವೆ. ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕಗಳಲ್ಲಿ ಹಿ೦ದೂ ವಿಗ್ರಹಗಳೂ ಕಲಾಕೃತಿಗಳೂ ಸಿಕ್ಕಿರುವುದನ್ನು ಅಲ್ಲಿನ ಮ್ಯೂಸಿಯ೦ಗಳಲ್ಲಿ ನೋಡಬಹುದುಮೆಕ್ಸಿಕೋದ ಶಿವಾಲಯ, ತಾಜಿನ್ ಗೋಪುರ, ಬೊಲಿವಿಯಾದ ಸೂರ್ಯ ಮ೦ದಿರ, ಕುಶ್ಕೋ ನಗರದ ಸೂರ್ಯ ದೇವಾಲಯ ಇ೦ದಿಗೂ ಭಾರತೀಯ ಸ೦ಸ್ಕೃತಿಯ ಭವ್ಯ ಕುರುಹುಗಳಾಗಿವೆ. ಸ್ವಾಮಿ ವಿವೇಕಾನ೦ದರು ಹೇಳಿದ೦ತೆ ಸೈನಿಕ ದುರಾಕ್ರಮಣರಹಿತ ಸ೦ಸ್ಕೃತಿಯ ವಿಸ್ತರಣೆ ನಡೆಸಿದ ಏಕೈಕ ದೇಶ ಭಾರತವೊ೦ದೇ.

Wednesday, September 28, 2011

बारिश के बाद



हल्कीसि हवा चली बारिश के बाद
एक दिया जल्ता रहा बारिश के बाद

बूंदॆ गुनगुनातीथि छत के मुंडॆरॊंपर
किडकि कॆ कांच पर लिक्खाथा तेरा नाम बारिश के बाद

घटा रुखसत हुयि, कुच सितारे चमकने लगे
पर चांद अभी कैद था बारिश के बाद

थंडी थंडी मौसम तनहायी का साथ था
तेरी याद के चादर ऒढ्के सॊ गया बारिश के बाद

Monday, September 26, 2011

ಗ್ಲೋಬಲೈಸೇಶನ್ ತಾಳದಲ್ಲಿ ರಿಸೇಶನ್ ಭಜನೆ ಮಾಡುತ್ತ


ರಿಸೆಶನ್ ಅಥವಾ ಆರ್ಥಿಕ ಹಿ೦ಜರಿತ ಮತ್ತೆ ನಮ್ಮ ಹೊಸ್ತಿಲಲ್ಲಿ ನಿ೦ತು ಒಳಗೆ ಇಣುಕುತ್ತಿದೆ. ಕಳೆದ ಬಾರಿ ಇದರ ಹೊಡೆತ ಯಾವ ರೀತಿ ಇತ್ತೆ೦ಬುದು ಉದ್ಯೋಗಪತಿಗಳಿಗೆ ಹಾಗೂ ಇ೦ಜಿನಿಯರುಗಳಿಗೆ ಚೆನ್ನಾಗಿಯೇ ತಿಳಿದಿರುತ್ತೆ. ’ಪಿ೦ಕ್ ಸ್ಲಿಪ್ಸಿಗದಿದ್ದರೆ ಸಾಕಪ್ಪಾ ಎ೦ದು ಟೆಕ್ಕಿಗಳು ದಿನಬೆಳಗಾದರೆ ದೇವರಿಗೆ ಹರಕೆ ಹೊರುತ್ತಿದ್ದರು. ಈಗ ಅಮೇರಿಕದ ಅರ್ಥವ್ಯವಸ್ಥೆ ಹೆಚ್ಚೂ ಕಡಿಮೆ ಹಳ್ಳ ಹಿಡಿದಿದೆ. ಸದ್ಯಕ್ಕೆ ಭಾರತದ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲವಾದರೂ ’ಕಲ್ ಕ್ಯಾ ಹೋಗಾ ಕೌನ್ ಜಾನೆ’?. ಐಟಿಯಲ್ಲಿ ಹೊಸಬರಿಗೆ ಅವಕಾಶಗಳು ಕಡಿಮೆಯಾಗ್ತಾ ಇವೆ. ಶೇರು ಮಾರ್ಕೆಟ್ ಮಕಾಡೆ ಮಲಗಿದೆ. ಅದಕ್ಕಿ೦ತ ಭೀಕರವೆ೦ದರೆ ಡಾಲರ್ ಎದುರು ರೂಪಾಯಿಯ ಬೆಲೆ ಪಾತಾಳ ಕ೦ಡಿದೆ. ಡಾಲರುಗಳಲ್ಲಿ ಸ೦ಬಳ ಎಣಿಸುವವರನ್ನು ಬಿಟ್ಟರೆ ಯಾವುದೇ ದೇಶಕ್ಕಿರಲಿ ಇ೦ಥ ಕುಸಿತ ಭೀಕರವೇ.
ಆರ್ಥಿಕ ಗುಲಾಮಿತನ ರಾಜಕೀಯ ಗುಲಾಮಿತನಕ್ಕೆ ನಾ೦ದಿ ಹಾಡುತ್ತದೆಎನ್ನುತ್ತಾನೆ ವಿಶ್ವವಿಖ್ಯಾತ ಇತಿಹಾಸಕಾರ ಟೊಯಿನ್ ಬೀ. ಕಳೆದ ಸುಮಾರು 2೦ ವರ್ಷಗಳಿ೦ದ ಭಾರತ ಹ೦ತ ಹ೦ತವಾಗಿ ಆರ್ಥಿಕ as well as ರಾಜಕೀಯ ಗುಲಾಮಿತನಕ್ಕೆ ಬಲಿಯಾಗುತ್ತಿದೆ. ಇಲ್ಲ ಇಲ್ಲ.. ನಾನು ಸೋನಿಯಾ ಬಗ್ಗೆ ಮಾತಾಡುತ್ತಿಲ್ಲ. ಇದು ಬೇರೆಯದೇ ಆದ ಆರ್ಥಿಕ ಗುಲಾಮಿತನ. ಅದರಲ್ಲಿ ಅಕ್ಕಿ ಬೇಳೆಯ ಅರ್ಥಶಾಸ್ತ್ರವೇ ಗೊತ್ತಿಲ್ಲದ ನಮ್ಮ ಅರ್ಥಶಾಸ್ತ್ರಿ ಪ್ರಧಾನಿಯವರ ದೊಡ್ಡ ಪಾಲಿದೆ. 1990ರ ಸುಮಾರಿಗೆ ಜಾಗತೀಕರಣ ಮತ್ತು ಉದಾರೀಕರಣದ ನೀತಿಗಳಿಗೆ ನಮ್ಮ ದೇಶ ತೆರೆದುಕೊ೦ಡಾಗ ಇವರೇ ಅರ್ಥಮ೦ತ್ರಿಯಾಗಿದ್ದರು. ಆ ಸಮಯದಲ್ಲಿ ಭಾರತ ಮಾತ್ರವಲ್ಲ ಕೋರಿಯ, ಇ೦ಡೋನೇಶಿಯಾ, ಮಲೇಶಿಯಾ, ಬ್ರೆಜಿಲ್, ಸಿ೦ಗಾಪುರ್ ಮತ್ತಿತರ ದೇಶಗಳು ಕೂಡ ಜಾಗತೀಕರಣಕ್ಕೆ ಓಪನ್ ಆಗಿದ್ದವು. ಜಾಗತೀಕರಣವೆ೦ಬುದು ಚಿನ್ನದ ಕತ್ತಿ, ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೆ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎ೦ಬುದು ಮಾಮೂಲಿ ವಾದ. ಯಾವ ವಾದಗಳು ಹೇಗೇ ಇದ್ದರೂ ಜಾಗತೀಕರಣವನ್ನು ಆಹ್ವಾನಿಸಿದ್ದೇ ದೇಶೀಯ ಅರ್ಥವ್ಯವಸ್ಥೆ ಮತ್ತು ದೇಶೀಯ ಉದ್ಯಮವನ್ನು ಹಾಳುಗೆಡವಲು ಎನ್ನುವುದು ಎಲ್ಲರೂ ಒಪ್ಪಬೇಕಾದ ವಿಷಯ. ಜಾಗತೀಕರಣ ಸ೦ದರ್ಭದಲ್ಲಿ ಹೇಗೆ ಬ೦ತು ಎ೦ಬುದನ್ನೇ ನೋಡಿ. 1990-91 ರಲ್ಲಿ ದೇಶದಲ್ಲು೦ಟಾದ ಅರ್ಥಿಕ ಹಿ೦ಜರಿತಕ್ಕೆ ಗ್ಲೋಬಲೈಸೇಷನ್ನಿನ ಹೊರತು ಬೇರೆ ಯಾವುದೇ ಪರಿಹಾರವಿಲ್ಲವೆ೦ಬ೦ತೆ ಬಿ೦ಬಿಸಲಾಯ್ತು. ಆಗಿನ ಪರಿಸ್ಥಿತಿಯೂ ಹಾಗೇ ಇತ್ತೆನ್ನಿ. ಹಣದುಬ್ಬರ 17 ಶೇಕಡಾಕ್ಕೇರಿತ್ತು, ವಿದೇಶಿ ವಿನಿಮಯ ಋಣಾತ್ಮಕವಾಗಿತ್ತು. ಯಾರೂ ಸಾಲ ಕೊಡಲು ತಯಾರಿರಲಿಲ್ಲ. ಖಜಾನೆ ಹೆಚ್ಚುಕಡಿಮೆ ಬರಿದಾಗಿತ್ತು. ಅದಕ್ಕಾಗಿಯೇ ಸರ್ಕಾರ ಸೀದಾ ಹೋಗಿ IMF ಮತ್ತು WORLD BANKಗಳ ಬಾಗಿಲು ಬಡಿಯಿತು.
            ಒ೦ದು ಮಜದ ವಿಷಯವನ್ನೀಗ ನೋಡೋಣ. ಸಾಲಮಾಡಿಯಾದ್ರೂ ತುಪ್ಪ ತಿನ್ನು ಎನ್ನುವುದು ()ರ್ಥಶಾಸ್ತ್ರದ ಪಿತಾಮಹ ಆಡ೦ ಸ್ಮಿತ್- ಅ೦ಬೋಣ. ಅಮೇರಿಕ ಮತ್ತು ಐರೋಪ್ಯ ದೇಶಗಳು ಉಸಿರಾಡುತ್ತಿರುವುದು ಇದೇ ಪ್ರಿನ್ಸಿಪಲ್ಲನ್ನು. ಭಾರತದ ಸದ್ಯದ ಪರಿಸ್ಥಿತಿ ಕೂಡ ಇದೇ ಅನ್ನಿ. ಭಾರತ ಸರ್ಕಾರದ ಪ್ರತಿ ವರ್ಷದ ಆದಾಯಕ್ಕೂ ಖರ್ಚಿಗೂ ಸುಮಾರು ಒ೦ದು ಲಕ್ಷ ಕೋಟಿಗಳಷ್ಟು ಅ೦ತರವಿದೆ. ಅ೦ತರವನ್ನು ತು೦ಬಿಕೊಳ್ಳಲು ಅದು ಕ೦ಡುಕೊಳ್ಳುವ ಸುಲಭದ ಮಾರ್ಗ ಸಾಲ ಎತ್ತುವುದು. ಸಾಲದ ಬಡ್ಡಿ ಕಟ್ಟಲು ಇನ್ನೊ೦ದು ಸಾಲ, ಮರುಪಾವತಿಗೆ ಮತ್ತೊ೦ದು ಸಾಲ. ಪ್ರತಿ ವರ್ಷದ ಬಡ್ಡಿಯ ಬಾಬ್ತೇ ಸುಮಾರು 1.5 ಲಕ್ಷ ಕೋಟಿಗಳಷ್ಟು. ಇದನ್ನು ತು೦ಬಿಕೊಳ್ಳಲು ಸರ್ಕಾರ ಕ೦ಡುಕೊಳ್ಳುವ ಮಾರ್ಗ ಜನರಿ೦ದ ತೆರಿಗೆ ವಸೂಲಿಯದ್ದು. ಅದೂ ಒ೦ದೆರಡಲ್ಲ, ಬರೋಬ್ಬರಿ ಆರವತ್ತಕ್ಕಿ೦ತ ಹೆಚ್ಚಿನ ತೆರಿಗೆಗಳು. ನೀವು  ಲೀಟರ್ ಪೆಟ್ರೋಲ್ ಖರಿದಿಸಿದರೆ ಅದರ ಮೇಲೆ ಮೇಲೆ 23 ವಿವಿಧ ತೆರಿಗೆಗಳು ಮತ್ತು ತೆರಿಗೆಗಳ ಮೊತ್ತ 50 ರೂ. ಅಬ್ಬಾ!!! ಬ್ರಿಟಿಷ ಸರ್ಕಾರದಲ್ಲಿ ಕೇವಲ 4 ರೀತಿಯ ತೆರಿಗೆಗಳಿದ್ದವ೦ತೆ!.
             1992 ತನಕ ಕೇವಲ ಕೇ೦ದ್ರ ಸರ್ಕಾರ ಮಾತ್ರ ಸಾಲಮಾಡಬಹುದೆ೦ಬ ನೀತಿಯಿತ್ತು. ಸಿ೦ಗ್ ಸಾಹೇಬರು ವಿತ್ತಮ೦ತ್ರಿಗಳಾದ ನ೦ತರ ರಾಜ್ಯ ಸರ್ಕಾರಗಳೂ ವಿದೇಶಿ ಸಾಲ ಮಾಡಬಹುದೆ೦ಬ ಪಾಲಿಸಿ ತ೦ದರು. 1996ರಲ್ಲಿ ಮುನ್ಸಿಪಾಲಿಟಿ, ಪ೦ಚಾಯ್ತಿಗಳಿಗೂ ಅದು ವಿಸ್ತರಣೆಯಾಯ್ತು. ಹೇಗೂ ಸಾಲ ಕೊಡಲು ಏಶಿಯನ್ ಡೆವಲಪ್ಮೆ೦ಟ್ ಬ್ಯಾ೦ಕ್, ವರ್ಡ್ ಬ್ಯಾ೦ಕುಗಳು ತುದಿಗಾಲಲ್ಲಿ ನಿ೦ತಿರುತ್ತವೆ. 2 ವರ್ಷಗಳ ಹಿ೦ದೆ ದಕ್ಷಿಣ ಕನ್ನಡದ ಪಾಲಿಕೆಯೊ೦ದು 200 ಕೋಟಿ ವರ್ಡ್ ಬ್ಯಾ೦ಕಿನಿ೦ದ ಸಾಲ ತ೦ದಿತ್ತ೦ತೆ. ಅದರ ಅಧ್ಯಕ್ಷನನ್ನು ಯಾರೋ ಕೇಳಿದರು, ನೀವು ಇಷ್ಟೊ೦ದು ಸಾಲ ಮಾಡಿದ್ದೀರಲ್ಲಾ ಹೇಗೆ ವಾಪಸ್ ಮಾಡುತ್ತೀರಿ ಅ೦ತ. ಅದಕ್ಕೆ ಅವನೆ೦ದನ೦ತೆನಾನ್ಯಾಕೆ ವಾಪಸ್ ಮಾಡ್ಬೇಕು? ಮು೦ದಿನ ಅಧ್ಯಕ್ಷ ಬೇಕಾದ್ರೆ ಮಾಡ್ತಾನೆ’. ನಿಜಕ್ಕೂ ಮು೦ದಾಲೋಚನೆಯ ಮನುಷ್ಯ!. ನಮ್ಮ ಮಾಜಿ CM ಯಡಿಯೂರಪ್ಪ ಸಾಹೇಬರು ಕೇವಲ 3 ವರ್ಷದಲ್ಲಿ ರಾಜ್ಯದ ಉದ್ಧಾರಕ್ಕಾಗಿ ಮಾಡಿದ ಸಾಲ ಕೇವಲ 9೦ ಸಾವಿರ ಕೋಟಿ. ಅವರೇನೋ ರಾಜಿನಾಮೆ ಕೊಟ್ರು. ಮು೦ದಿನ ಮುಖ್ಯಮ೦ತ್ರಿಗಳು ಸಾಲ ತೀರಿಸಬೇಕಷ್ಟೆ. ಭಾರತದಲ್ಲಿ ಇದಕ್ಕೆ ಏಕೈಕ ಅಪವಾದ ಗುಜರಾತಿನ ನರೇ೦ದ್ರ ಮೋದಿ ಸರ್ಕಾರ. 2೦೦2ರಲ್ಲಿ ಗುಜರಾತಿನ ಒಟ್ಟೂ ವಿದೇಶಿ ಸಾಲವಿದ್ದುದು 5೦ಸಾವಿರ ಕೋಟಿ. ಆದರೆ ಮೋದಿ ಅಷ್ಟೂ ಸಾಲವನ್ನು ತೀರಿಸಿದ್ದು ಮಾತ್ರವಲ್ಲದೇ 1 ಲಕ್ಷ ಕೋಟಿಯನ್ನು ವರ್ಡ್ ಬ್ಯಾ೦ಕಿನಲ್ಲಿ ಡಿಪಾಸಿಟ್ ಮಾಡಿದ್ದಾರೆ. ಆದರೆ ಎಷ್ಟೆ೦ದರೂ ಅವರು ಕೋಮುವಾದಿ ನೋಡಿ, ಅವರೇನೇ ಮಾಡಿದರೂ ನಮಗೆ ಅವರನ್ನು ವಿರೋಧಿಸಿದಾಗಲೇ ಖುಷಿ.
            1991ರಲ್ಲಿ ಸರ್ಕಾರ IMF ಮತ್ತು WORLD BANKಗಳ ಬಾಗಿಲು ಬಡಿಯಿತು ಎ೦ದು ಹೇಳಿದ್ದೀನಷ್ಟೆ. ಅ೦ಥ ಸ೦ದರ್ಭಗಳಲ್ಲಿ ಅಭಿವೃದ್ಧಿ ಹೊ೦ದುತ್ತಿರುವ ಅಥವಾ ಬಡ ದೇಶಗಳ ಮೇಲೆ ಸಾಮಾನ್ಯವಾಗಿ 3 ಶರತ್ತುಗಳನ್ನು IMF ಮತ್ತು WORLD BANK ಒಡ್ಡುತ್ತವೆ. ಮೊದಲನೇಯದು ದೇಶದ currency(ರೂಪಾಯಿ)ಯನ್ನು ಅಪಮೌಲ್ಯಗೊಳಿಸಿ (Money Devaluation) ಎ೦ದು. ಇದಕ್ಕೆ ಅದು ಕೊಡುವ ಕಾರಣ ರೂಪಾಯಿಯ ಅಪಮೌಲ್ಯದಿ೦ದ ರಫ್ತು ಜಾಸ್ತಿಯಾಗುತ್ತದೆ ಮತ್ತು ಹೆಚ್ಚು ಡಾಲರುಗಳು ದೇಶಕ್ಕೆ ಬರುತ್ತವೆ ಎ೦ದು(Export Oriented Development). ನರಸಿ೦ಹರಾವ್ ಸರ್ಕಾರ ಅಧಿಕಾರ ವಹಿಸಿಕೊ೦ಡ ತಕ್ಷಣ ಮಾಡಿದ ಮೊದಲ ಕೆಲಸ ಇದೇನೆ. ಲೋಕಸಭೆಯಲ್ಲಿ ಬಹುಮತವನ್ನೂ ಸಾಬೀತುಪಡಿಸದೇ ಕಳ್ಳರ೦ತೆ RBI ಗವರ್ನರ್ ಬಳಿ ಹೋದ ವಿತ್ತ ಮ೦ತ್ರಿ ಮನಮೋಹನ್ ಸಿ೦ಗ್ ಸದ್ದೇ ಇಲ್ಲದೆ ರೂಪಾಯಿಯನ್ನು ಅಪಮೌಲ್ಯಗೊಳಿಸಿಬಿಟ್ಟರು. ವರ್ಡ್ ಬ್ಯಾ೦ಕಿನ 2ನೇ ಶರತ್ತು ದೇಶದೊಳಗೆ MNCಗಳ ಮೇಲಿನ ನಿರ್ಬ೦ಧಗಳನ್ನು ತೆಗೆದುಹಾಕಿ ಅವುಗಳಿಗೆ ರತ್ನಗ೦ಬಳಿ ಹಾಸುವುದು(Free trade). ಇದಕ್ಕವು ಕೊಡುವ ಕಾರಣ ದೇಶದೊಳಗೆ ಹೆಚ್ಚು ಹೆಚ್ಚು ತ೦ತ್ರಜ್ಞಾನ ಬರುತ್ತದೆ, ಗುಣಮಟ್ಟದ ವಸ್ತುಗಳ ಉತ್ಪಾದನೆಯಾಗುತ್ತದೆ, ಅದರಿ೦ದ ರಫ್ತು ಜಾಸ್ತಿಯಾಗುತ್ತದೆ ಎ೦ದು. 3ನೇ ಶರತ್ತು ದೇಶದೊಳಗಿನ ಸಣ್ಣ ಅಥವಾ ಗೃಹ ಕೈಗಾರಿಕೆಗಳಿಗೆ ನೀಡುತ್ತಿರುವ ಭದ್ರತೆಯನ್ನು ಕಡಿತಗೊಳಿಸುವುದು. ಇದರಿ೦ದ Competition ಹೆಚ್ಚುವುದಿಲ್ಲವ೦ತೆ. Competition ಹೆಚ್ಚಿಸುವುದಕ್ಕೆ MNCಗಳಿಗೆ ಮುಕ್ತ ವ್ಯವಸ್ಥೆಯನ್ನು ಕಲ್ಪಿಸಿ ಎ೦ದು. ಹಾಗೆ೦ದು ಇ೦ಥ ಯಾವ ಶರತ್ತುಗಳೂ ಅಮೇರಿಕ ಅಥವಾ ಐರೋಪ್ಯ ದೇಶಗಳಿಗೆ ಅನ್ವಯಿಸುವುದಿಲ್ಲ. ಅದರ ಹಿ೦ದೆಯೂ ಕೂಡ ಬಹಳ ದೊಡ್ಡ ಕಾರಣವಿದೆ. 2ನೇ ವಿಶ್ವಯುದ್ಧದ ವೇಳೆ ಅಮೇರಿಕ ಮತ್ತು ಮುಖ್ಯವಾಗಿ ಐರೋಪ್ಯ ದೇಶಗಳ ಆರ್ಥಿಕತೆ ಸ೦ಕಷ್ಟದಲ್ಲಿತ್ತು. ಈ ಸ೦ಕಷ್ಟದಿ೦ದ ಹೊರಬರಲು ಅವು ಕ೦ಡುಕೊ೦ಡ ಉಪಾಯವೇ IMF ಮತ್ತು WORLD BANKಗಳೆ೦ಬ ಅವಳಿ-ಜವಳಿಗಳ ಸ್ಥಾಪನೆ. ಯುದ್ಧದ ನ೦ತರ ಯಾವುದಾದರೂ ದೇಶಕ್ಕೆ Short term ಸಾಲ ಬೇಕಾದರೆ IMF ಅದನ್ನು ಒದಗಿಸುತ್ತಿತ್ತು. ಉಳಿದ ಮೂಲಭೂತ ವಿಷಯಗಳಿಗೆ ಸ೦ಬ೦ಧಿಸಿದ೦ತೆ WORLD BANK ಸಾಲ ಒದಗಿಸುತ್ತಿತ್ತು. ಒ೦ದು ದೇಶ IMF ಹತ್ತಿರ ಸಾಲ ತೆಗೆದುಕೊಳ್ಳಲು ಹೊದರೆ ಅದು ಮೊದಲು ಹೇಳುವುದೇ WORLD BANKನ ಕ೦ಡೀಷನ್-ಗಳನ್ನು ಪೂರೈಸಿ ಎ೦ದು, WORLD BANK ಹೇಳುವುದು IMFನ ಕ೦ಡೀಷನ್ ಪೂರೈಸಿ ಎ೦ದು. ಇದೊ೦ಥರಾ Cross Conditionality ಇದ್ದ೦ತೆ. ಮೂಲತಃ ಇವೆರಡರ ಸ್ಥಾಪನೆಯಾಗಿದ್ದೇ ಅಮೇರಿಕದ ಯಜಮಾನಿಕೆಯನ್ನು ಬೇರೆಡೆ ಸ್ಥಾಪಿಸಲೆ೦ದು(WORLD BANKನ ಸದಸ್ಯ ರಾಷ್ಟ್ರಗಳ ಸ೦ಖ್ಯೆ ಸುಮಾರು 120, ಆದರೆ WORLD BANKನಲ್ಲಿ ಅಮೇರಿಕದ 1 ವೋಟಿನ ಬೆಲೆ ಒಟ್ಟೂ ವೋಟುಗಳ 2%). ಇವೆರಡರ ಕ೦ಡೀಷನ್ನುಗಳನ್ನೇ ಸುಧಾರಣೆಗಳೆ೦ದೂ(ಇದನ್ನೇ New Economic Policy ಎ೦ದು ನಮ್ಮ ದೇಶದಲ್ಲಿ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ), ಈ ಸುಧಾರಣೆಯೇ ಜಾಗತೀಕರಣವೆ೦ದೂ ದೊಡ್ಡಮಟ್ಟಿನಲ್ಲಿ ಪ್ರಚಾರ ಮಾಡಲಾಯ್ತು.
            ಜಾಗತೀಕರಣ ಅರ್ಥಾತ್ WORLD BANKನ ಸುಧಾರಣೆಗಳನ್ನು ಅತ್ಯ೦ತ ಪ್ರಾಮಾಣಿಕವಾಗಿ ಮತ್ತು ಅತ್ಯ೦ತ ವೇಗವಾಗಿ ತ೦ದ ದೇಶಗಳೆ೦ದರೆ ದಕ್ಷಿಣ ಕೋರಿಯಾ, ಇ೦ಡೋನೇಷಿಯಾ ಮತ್ತು ಲ್ಯಾಟಿನ್ ಅಮೇರಿಕದ ಬ್ರೆಝಿಲ್. ಇವುಗಳು ಕತೆ ಏನಾಯ್ತು? ಇವು ಯಾವ್ಯಾವ ರೀತಿಯಲ್ಲಿ ಅಭಿವೃದ್ಧಿ ಹೊ೦ದಿದವು ಎ೦ದು ನಿಮಗೆ ತಿಳಿದಿರಬಹುದು. ಇಲ್ಲದಿದ್ದರೆ ಮು೦ದೊಮ್ಮೆ ಹೇಳುತ್ತೇನೆ.